Site icon Suddi Belthangady

ಕಾಸಿಂ ಪದ್ಮುಂಜ ರವರಿಗೆ ಮಾಪಾಲ್ ಜಮಾಅತ್ ವತಿಯಿಂದ ಗೌರವಾರ್ಪಣೆ

ಪದ್ಮುಂಜ: ಇಲ್ಲಿಯ ಪತ್ರಿಕಾ ಪ್ರತಿನಿಧಿ ಸಮಾಜ ಸೇವಕ ಕಾಸಿಂ ಪದ್ಮುಂಜ ರವರಿಗೆ ಮಾಪಾಲು ಜಮಾತರ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಮೊಗ್ರು ಗ್ರಾಮದ ಮಾಪಾಲು ಖಿಲ್ರ್ ಜುಮಾ ಮಸ್ಜಿದ್ ಫತುಹುತ್ತಾಲಿಬೀನ್ ಮದರಸದ ಕಡತವಿಲೇವಾರಿ ಮಾಡಿಸಿಕೊಟ್ಟ ಪ್ರಯುಕ್ತವಾಗಿ ಕಾಸಿಂ ಪದ್ಮುಂಜ ರವರಿಗೆ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಜಮಾಅತ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅಸ್ಲಮಿ ಯವರು ಮಾತನಾಡಿ ನಮ್ಮ ಮಸೀದಿ ಮದರಸದ ಕಡತ ವಿಲೇವಾರಿ ಮಾಡಿಕೊಡುವಂತೆ ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕ್ಕೊಂಡು ಸಮಯಕ್ಕೆ ಸರಿಯಾಗಿ ನೆರವೇರಿಸಿಕೊಟ್ಟಿದ್ದಾರೆ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಜಮಾತರ ಪರವಾಗಿ ಹಾಗೂ ಸಹ ಸಂಘ ಸಂಸ್ಥೆಗಳ ಪರವಾಗಿ ಗೌರವಿಸಲಿದ್ದೇವೆ ಎಂದರು.ಗೌರವ ಸ್ವೀಕರಿಸಿ ಮಾತನಾಡಿದ ಕಾಸಿಂ ಪದ್ಮುಂಜ ರವರು ಜಮಾತರಿಗೆ ಹಾಗೂ ಸಹ ಸಂಘ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸಿದರು.

ಮಸೀದಿಯ ಧರ್ಮ ಗುರುಗಳಾದ ಜಾಬಿರ್ ಫೈಝಿಯವರು ದುಆ ನೆರವೇರಿಸಿದರು.ದಾವೂದ್ ಮುಸ್ಲಿಯಾರ್, ಸುಲೈಮಾನ್ ಬೀಡಿ, ಎಂ ಸುಲೈಮಾನ್, ಸೈಫುದ್ದೀನ್ ಹಾಸಿಮಿ, ಸುಲೈಮಾನ್ ಸಣ್ಣ, ಇಸ್ಮಾಯಿಲ್, ಸಾಬಿರ್ ಫೈಝಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಝಿಯಾದ್ ಅಸ್ಲಮಿ ಸೇರಿದಂತೆ ಜಮಾಅತ್ ನೇತಾರರು ಸಂಘ ಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.

ಜಮಾತ್ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅಸ್ಲಮಿ ಯವರು ಸ್ವಾಗತಿಸಿ, ಕಾರ್ಯದರ್ಶಿ ಝಕರಿಯಾ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿದರು.

Exit mobile version