Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ಕವಿ ಪುತಿನ ಸಂಸ್ಮರಣೆ

ಬೆಳಾಲು: ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಕವಿ ಸಾಹಿತಿ ಪುತಿನ ಎಂದೇ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಸಂಸ್ಕರಣೆ ಮತ್ತು ಪರಿಚಯ ಕಾರ್ಯಕ್ರಮ ಜರಗಿತು.

ಈ ಹಿನ್ನೆಲೆಯಲ್ಲಿ ಪುತಿನ ರವರಿಗೆ ಸಂಬಂಧಿಸಿದ ರಸಪ್ರಶ್ನೆಯನ್ನು ವಿದ್ಯಾರ್ಥಿ ಕು.ಸಮೀಕ್ಷಾ ನಡೆಸಿದರೆ ಅವರ ಪರಿಚಯವನ್ನು ಕು.ಅಶ್ವಿನಿ ಮಾಡಿದರು.

ಕು.ಲಿಖಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಮನ್ ರವರ ಮಾರ್ಗದರ್ಶನದಲ್ಲಿ ಸಂಸ್ಕರಣಾ ಕಾರ್ಯಕ್ರಮ ನೆರವೇರಿತು.

Exit mobile version