Site icon Suddi Belthangady

ಇಂದಬೆಟ್ಟು: ಶ್ರೀ ಧರ್ಮಸ್ಥಳ ಶೌರ್ಯ ಘಟಕದ ವತಿಯಿಂದ ಬಂಗಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಇಂದಬೆಟ್ಟು: ಬೆಳ್ತಂಗಡಿ ತಾಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ಘಟಕದ ವತಿಯಿಂದ ಬಂಗಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಡಿಯಲ್ಲಿ ಈ ಹಿಂದೆ ನಾಟಿ ಮಾಡಿರುವ ಅಡಿಕೆ ಬುಡಗಳ ಸ್ವಚ್ಛತೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ, ಶೌರ್ಯ ಘಟಕದಿಂದ ವತಿಯಿಂದ ಶಾಲೆಯಲ್ಲಿ ಹಣ್ಣಿನ ಗಿಡಗಳ ನಾಟಿಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶೌರ್ಯ ಘಟಕದ ಮಾಸ್ಟರ್ ಸಂತೋಷ್ ಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳು, ಕೊಲ್ಲಿ-ಕಿಲ್ಲೂರು ಘಟಕದ ಸಂಯೋಜಕ ಉಮೇಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾ ಮಕ್ಕಳು, ಪೋಷಕರು, ಯೋಜನೆಯ ಕೃಷಿ ಅಧಿಕಾರಿ ರಾಮಕುಮಾರ್, ಮೇಲ್ವಿಚಾರಕರಾದ ಉಷಾ, ಶೌರ್ಯ ಘಟಕದ ಸಂಯೋಜಕ ಕೇಶವ ಗೌಡ, ಘಟಕ ಪ್ರತಿನಿಧಿ-ಪವನ್ ಕುಮಾರ್, ಸೇವಾಪ್ರತಿನಿಧಿ ಶೈಲಾ, ಘಟಕದ ಸದಸ್ಯರಾದ ಹರಿಣಾಕ್ಷಿ, ಯಶೋಧಾ, ಚಂದ್ರಶೇಖರ ಗೌಡ, ಬಾಲಕೃಷ್ಣ ಗೌಡ, ಸುಧೀಶ್ ಕುಮಾರ್, ವಿಶ್ವನಾಥ ಗೌಡರವರು ಉಪಸ್ಥಿತರಿದ್ದರು.

Exit mobile version