Site icon Suddi Belthangady

ಸಿದ್ದವನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಒಕ್ಕೂಟದ ವತಿಯಿಂದ ವಿಶ್ವ ಪರಿಸರ- ದಿನ ಗಿಡನಾಟಿ ಕಾರ್ಯಕ್ರಮ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನೀರಚಿಲುಮೆ ಇದರ ವತಿಯಿಂದ ಸಿದ್ದವನ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳ ನಾಟಿ ಮತ್ತು ಶಾಲಾ ಕೈತೋಟ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮಭಿವೃದ್ಧಿ ಯೋಜನೆಯ ನೀರಚಿಲುಮೆ ಒಕ್ಕೂಟದ ನೂತನ ಅಧ್ಯಕ್ಷ ದಿವಾಕರ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಜಯಂತಿ,ಯಂತ್ರಶ್ರೀ ಯೋಧರಾದ ರತ್ನಾಕರ ಗೌಡ, ಒಕ್ಕೂಟದ ಪದಾಧಿಕಾರಿಗಳು ಮತ್ತು ತಂಡದ ಸದಸ್ಯರು, ಶಾಲಾ ಮಕ್ಕಳು, ಶಾಲಾ ಮುಖ್ಯೋಪಾಧ್ಯಯ ಅನುಸೂಯ ಮೇಡಂರವರ ಸಹಕಾರದೊಂದಿಗೆ ಶಾಲೆಯಲ್ಲಿ ಅಡಿಕೆಯ ಗಿಡನಾಟಿ ಹಾಗು ಶಾಲಾ ಕೈತೋಟ ರಚನೆಯನ್ನು ಮಾಡಲಾಯಿತು.

ಮೇಲ್ವಿಚಾರಕಿ ವನಿತಾ, ಕೃಷಿ ಅಧಿಕಾರಿ ರಾಮ್ ಕುಮಾರ್, ಸೇವಾಪ್ರತಿನಿಧಿ ಪ್ರಮೀಳಾ ಉಪಸ್ಥಿತರಿದ್ದರು.

Exit mobile version