Site icon Suddi Belthangady

ಉಜಿರೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಉಜಿರೆ: ಭಾರಿ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭದಿಂದಲೇ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭರ್ಜರಿ ಜಯಗಳಿಸಿದ ಅಂಗವಾಗಿ ಉಜಿರೆಯ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪಪಟಾಕಿ ಸಿಡಿಸಿ, ಜಯ ಘೋಷ ಕೂಗಿ ಗೆಲುವನ್ನು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಪಂಚಾಯತ್ ಸದಸ್ಯರಾದ ಸಚಿನ್, ಮಂಜುನಾಥ್ ಗೌಡ, ಬೂತ್ ಸಮಿತಿಯ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಉದ್ಯಮಿಗಳಾದ ರವಿ ಚೆಕ್ಕಿತ್ತಾಯ, ಪ್ರಸಾದ್ ಬಿ.ಎಸ್, ಹುಕುಂ ರಾಮ್ ಪಾಟೇಲ್, ಬಿಜೆಪಿ ಪಕ್ಷದ ಕಾರ್ಯಕತರು ಉಪಸ್ಥಿತರಿದ್ಧರು.

Exit mobile version