Site icon Suddi Belthangady

ಲೋಕಸಭೆ ಚುನಾವಣೆ: ಭವಿಷ್ಯದ ಭಾರತಕ್ಕಾಗಿ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ-ಅನಿಲ್ ಕುಮರ್

ಬೆಳ್ತಂಗಡಿ: ಈ ಚುನಾವಣೆ ರಾಷ್ಟ್ರಿಯತೆಯ ಆಧಾರದಲ್ಲಿ ನರೇಂದ್ರ ಮೋದಿ ಸರಕಾರದ ದೂರದೃಷ್ಟಿಯ ಯೋಜನೆಗಳು ಹಾಗೂ ಭವಿಷ್ಯದ ಭಾರತಕ್ಕಾಗಿ ಮುಂದಿನ ಪೀಳಿಗೆಯ ಸ್ವಾಭಿಮಾನದ ಬದುಕಿಗಾಗಿ ಜಿಲ್ಲೆಯ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ, ವಕೀಲರಾಗಿರುವ ಅನಿಲ್ ಕುಮಾರ್ ಹೇಳಿದ್ದಾರೆ.

ಈ ಕಾರಣಕ್ಕಾಗಿ ಯುವನಾಯಕ ದ.ಕ ಜಿಲ್ಲೆಯ ಬಗ್ಗೆ ವಿಶೇಷ ಕನಸು ಚಿಂತನೆಯನ್ನು, ಹೊಂದಿರುವ ಕ್ಯಾ. ಬ್ರಿಜೇಶ್ ಚೌಟ ರವರು ಜಯಶಾಲಿಯಾಗಿದ್ದಾರೆ.

ಹಿಂದುತ್ವ, ಅಭಿವೃದ್ಧಿ, ಹಾಗೂ ಸ್ವಾಭಿಮಾನದ ಭಾರತ, ಸಶಕ್ತ ಭಾರತ, ವಿಕಸಿತ ಭಾರತದ ನಿರ್ಮಾಣದ ಪರಿಕಲ್ಪನೆಯನ್ನು ಜಾರಿಗೆ ತರಲು ದೇಶದಲ್ಲಿ (ಎನ್ ಡಿ ಎ) ಮೋದಿ ಸರ್ಕಾರ ಮತ್ತೊಮ್ಮೆ ಬರಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version