Site icon Suddi Belthangady

ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿಯಾಗಿ ಕೌಶಿಕ್, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ನೇಮಕ

ಬೆಳಾಲು: ಶ್ರೀ ಸುಬ್ರಮಣ್ಯಶ್ವರ ಭಜನಾ ಮಂಡಳಿ ಕೊಲ್ಪಾಡಿ ಇದರ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮೇ 25ರಂದು ಭಜನಾ ಮಂದಿರದಲ್ಲಿ ನಡೆಯಿತು.

ಗೌರವ ಅಧ್ಯಕ್ಷರಾಗಿ ಸದಾಶಿವ ಗೌಡ ಮೈರಾಜೆ, ಅಧ್ಯಕ್ಷರಾಗಿ ಕೃಷ್ಣಯ್ಯ ಆಚಾರ್ಯ ಕುರುಡಾಡಿ, ಕಾರ್ಯದರ್ಶಿಯಾಗಿ ಕೌಶಿಕ್ ಕುರ್ಕಿಲು, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ಕುರ್ಕಿಲು, ಜತೆ ಕಾರ್ಯದರ್ಶಿಗಳಾಗಿ ರಾಜೇಶ್ ಬರೆಮೇಲು, ಸೌಮ್ಯ ಮಣಿಕ್ಕಳ, ಉಪಾಧ್ಯಕ್ಷರುಗಳಾಗಿ ಜಯಾನಂದ ಮೈರಾಜೆ, ಹೇಮಲತಾ ಮರಕ್ಕಡ, ಸುಧಾಕರ ಮೈರಾಜೆ, ಲೆಕ್ಕ ಪರಿಶೋಧಕರಾಗಿ ಶ್ರೇಯಸ್ ಹುಣ್ಸೆದಡಿ, ರಮೇಶ್ ಮರಕ್ಕಡ, ಮಕ್ಕಳ ಭಜನಾ ಸಂಚಾಲಕರಾಗಿ ಆಶಾ ಒಣಾಜೆ, ಉದಯ ಆಚಾರ್ಯ ಕೆಳಗಿನ ಒಣಾಜೆ, ವಿಶ್ವಾಸ್ ಮೈರಾಜೆ ಆಯ್ಕೆಯಾದರು.

ಸದಸ್ಯರಾಗಿ ಭಜನಾ ಮಂಡಳಿಯ ಸರ್ವ ಸದಸ್ಯರು ಸಹಕರಿಸಿದರು.

Exit mobile version