Site icon Suddi Belthangady

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ವತಿಯಿಂದ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ

ಮಾಚರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಶ್ರೀ ಲಕ್ಹ್ಮೀ ಜನಾರ್ದನ ದೇವಸ್ಥಾನ ಮಾಚಾರ ಇದರ ಅಶ್ರಯದಲ್ಲಿ ಮತ್ತು ಊರವರ ಸಹಕಾರದೊಂದಿಗೆ ಶ್ರೀ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಲಕ್ಷ್ಮಿ ಜನಾರ್ದನ ದೇವಸ್ಥಾನದಲ್ಲಿ ಒಕ್ಕೂಟದ ಎಲ್ಲಾ ಸದಸ್ಯರ ಊರವರ ಸಂಪೂರ್ಣ ಸಹಕಾರದೊಂದಿಗೆ ನಡೆಸಲಾಯಿತ್ತು.

ಪೂಜೆ ಪ್ರಾರಂಭದ ಮೊದಲು ಶ್ರೀ ಲಕ್ಷೀ ಜನಾರ್ಧನ ಕುಣಿತ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆಯನ್ನು ಸಮಿತಿ ಅಧ್ಯಕ್ಷರು ರಾದ ಗಿರಿರಾಜ ಬಾರಿತ್ತಾಯರವರು ಮತ್ತು ಒಕ್ಕೂಟದ ಎಲ್ಲಾ ಪದಾಧಿಕಾರಿಯವರು ದೀಪ ಪ್ರಜ್ವಲನೇ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಸರಕಾರಿ ಹುದ್ದೆಯಲ್ಲಿ ಇದ್ದು ಇದೀಗ ನಿವೃತಿಯನ್ನು ಹೊಂದಿದ ಇಳಂತಿಲ ಪಂಚಾಯತು PDO ಸಂಜೀವ ನಾಯ್ಕ್, ತೋಟಗಾರಿಕೆ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲೋಕಯ್ಯ ನಾಯ್ಕ್ ರವರಿಗೆ ವಿಶೇಷವಾಗಿ ಒಕ್ಕೂಟ ವತಿಯಿಂದ ಸನ್ಮಾನವನ್ನು ನಡೆಸಲಾಯಿತ್ತು.

ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೋಕೆಸ್ತರಾದ ಶರತ್ ಕೃಷ್ಣ ಪಡುವೆಟ್ನಯ, ಪೂಜಾ ಸಮಿತಿ ಅಧ್ಯಕ್ಷರು ಗಿರಿರಾಜ ಬಾರಿತ್ತಾಯ, ನಿವೃತ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ, ವಲಯ ಮೇಲ್ವಿಚಾರಕರು, ಒಕ್ಕೂಟದ ನೂತನ ನಿಕಟ ಪೂರ್ವ ಪದಾಧಿಕಾರಿಯವರು ಉಪಸ್ಥಿತರಿದ್ದರು..

Exit mobile version