Site icon Suddi Belthangady

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ: ವಿಶಿಷ್ಟ ಶ್ರೇಣಿ ವಿದ್ಯಾರ್ಥಿಗಳಿಗೆ ಸನ್ಮಾನ

ಮುಂಡಾಜೆ: ಬಂಟರ ಗ್ರಾಮ ಸಮಿತಿಯ ಮಾಸಿಕ ಸಭೆಯು ಸಂಜೀವ ಶೆಟ್ಟಿ ನಾಗಂಡ ಇವರ ಪುತ್ರ ಪ್ರದೀಪ್ ಶೆಟ್ಟಿ ರವರ ಮನೆಯಲ್ಲಿ ಜೂ.2ರಂದು ನಡೆಯಿತು.

ಸಭೆಯಲ್ಲಿ ಗ್ರಾಮ ಸಮಿತಿಯ ಸುಮಾರು 65 ಮನೆಗಳವರು ಭಾಗವಹಿಸಿದ್ದರು.

ಮನೆಯ ಹಿರಿಯರಾದ ಸಂಜೀವ ಶೆಟ್ಟಿ ದಂಪತಿ ಮತ್ತು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಅಗರಿ ಇವರು ವಹಿಸಿ, ಸಮಿತಿ ಸದಸ್ಯರಿಗೆ ಸಲಹೆಗಳನ್ನು ನೀಡಿ, ಸನ್ಮಾನಿತರಿಗೆ ಶುಭ ಕೋರಿದರು.

ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.ಸಂಚಾಲಕ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ಕಾರ್ಯದರ್ಶಿ ವಿಜಯಕುಮಾರ್ ರೈ, ಸದಸ್ಯರಾದ ಕಲ್ಯಾಣಿ ಕಲಾಮಧು ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕೋಶಾಧಿಕಾರಿ ಜಯಾನಂದ ಶೆಟ್ಟಿ ಮುಂಡ್ರುಪಾಡಿ, ಉಪಾಧ್ಯಕ್ಷೆ ವಿಶಾಲಾಕ್ಷಿ ರೈ ಸೋಮಂತಡ್ಕ ಮತ್ತು ಸ್ಥಳೀಯ ಪ್ರತಿನಿಧಿ ಪ್ರದೀಪ್ ಶೆಟ್ಟಿ ನಾಗಂಡ ಇವರು ಉಪಸ್ಥಿತರಿದ್ದರು.

ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ಪ್ರಾರ್ಥಿಸಿ, ನವೀತ್ ಶೆಟ್ಟಿ ನೆಯ್ಯಲು ಇವರು ನಿರೂಪಿಸಿದರು.

ವಿಜಯಕುಮಾರ್ ರೈ ಇವರು ಸ್ವಾಗತಿಸಿ ಪ್ರತೀಕ್ ರೈ ಇವರು ಧನ್ಯವಾದಿಸಿದರು. ಗ್ರಾಮ ಸಮಿತಿಯ ಸರ್ವ ಸದಸ್ಯರು ಸಹಕರಿಸಿದರು.

Exit mobile version