Site icon Suddi Belthangady

ಧರ್ಮಸ್ಥಳ: ಕಲ್ಲೇರಿ ಗ್ಯಾರೇಜಿನ ನಾಗೇಶ್ ಪೂಜಾರಿ ಹೃದಯಾಘಾತದಿಂದ ನಿಧನ- ಜೂನ್ 04ರಂದು ಅಂತಿಮ ಸಂಸ್ಕಾರ

ಧರ್ಮಸ್ಥಳ: ಇಲ್ಲಿನ ಕಲ್ಲೇರಿಯ ಗ್ಯಾರೇಜಿನಲ್ಲಿ ಜನಮನ ಸೆಳೆದಿದ್ದ ಲೇತ್ ವರ್ಕರ್ ನಾಗೇಶ್ (56ವ) ರವರು ಇಂದು ಜೂನ್ 02 ರಂದು ದೊಂಡೋಲೆಯ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾಗೇಶ್ ರವರ ಮಗ ನಯನ್ ಕುಮಾರ್ ಉದ್ಯೋಗ ನಿಮಿತ್ತ ವಿದೇಶದಲ್ಲಿರುವುದರಿಂದ ನಾಗೇಶ್ ರವರ ಮೃತದೇಹದ ಅಂತಿಮ ಸಂಸ್ಕಾರ ಜೂನ್ 4ರಂದು ನಡೆಯಲಿದೆ.

ಜೂನ್ 4ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಮೃತರು ಪತ್ನಿ ನಳಿನಿ, ಮಕ್ಕಳಾದ ನಯನ್, ಸಚಿನ್, ಮಗಳು ಕಾವ್ಯ, ಅಳಿಯ ಯಶೋದರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version