Site icon Suddi Belthangady

ನಿಡ್ಲೆ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಒಕ್ಕೂಟದ ಸಭೆ

ಕೊಕ್ಕಡ: ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕಡ ವಲಯದ ನಿಡ್ಲೆ ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಸಭೆ ಒಕ್ಕೂಟದ ಅಧ್ಯಕ್ಷ ಕಿಟ್ಟ ಕೈರೋಲಿ ಅಧ್ಯಕ್ಷತೆಯಲ್ಲಿ ನಡೆಯಿತು.

ವಲಯ ಮೇಲ್ವಿಚಾರಕಿ ಭಾಗೀರಥಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ, ವಿಮಾ ಕಾರ್ಯಕ್ರಮ, ವಾರದ ಸಭೆ ಪ್ರಗತಿನಿಧಿ ಸಾಲ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟವನ್ನು ಉತ್ತಮ ಒಕ್ಕೂಟವನ್ನಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎನ್ನುವುದನ್ನು ತಿಳಿಸಿದರು.

ಒಕ್ಕೂಟದ ಪದಾಧಿಕಾರಿಗಳು ಗಿರೀಶ್ ಬಿ., ನೊಣಯ್ಯ ಬಾವಲಿಕಾಡು, ಸುಶ್ಮಿತಾ, ನಾಗವೇಣಿ ನಿಕಟಪೂರ್ವ ಅಧ್ಯಕ್ಷೆ ಪದ್ಮಾವತಿ, ಸೇವಾಪ್ರತಿನಿಧಿ ಸೇಸಪ್ಪ ಗೌಡ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸುರೇಶ ನಲಿಕೆ ಮುಂತಾದವರು ಉಪಸ್ಥಿತರಿದ್ದರು.

Exit mobile version