Site icon Suddi Belthangady

ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕ ಕೃಷ್ಣಪ್ಪ ಸೇವಾ ನಿವೃತ್ತಿ- ಸಮಾಜ ಕಲ್ಯಾಣ ಇಲಾಖೆಯಿಂದ ಬಿಳ್ಕೋಡುಗೆ ಸಮಾರಂಭ

ನೆರಿಯ: ಸಮಾಜ ಕಲ್ಯಾಣ ಇಲಾಖೆಯಲ್ಲಿ ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕೃಷ್ಣಪ್ಪ.ಎ ಅವರು ಮೇ 31ರಂದು ನಿವೃತ್ತಿ ಹೊಂದಿದರು.

ಬೀಳ್ಕೊಡುಗೆ ಸಮಾರಂಭವು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುರಳೀಧರ್, ಕಚೇರಿ ಅಧೀಕ್ಷಕ ಧನಂಜಯ, ಅಶೋಕ್ ದೇವಾಡಿಗ ತಾಲೂಕು ಪಂಚಾಯತ್ ಲೆಕ್ಕ ಶಾಖೆ, ಇವರು ಉಪಸ್ಥಿತರಿದ್ದರು.

ಅಳದಂಗಡಿ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಹೇಮಲತಾ ಸ್ವಾಗತಿಸಿದರು.

ವಾಲ್ಮೀಕಿ ಆಶ್ರಮ ಶಾಲೆ ನೆರಿಯ, ಶಿಶಿಲ, ನಾರಾವಿ., ಶಿಕ್ಷಕರ, ಸಿಬ್ಬಂದಿಗಳೂ ಬೀಳ್ಕೊಡುಗೆ ಸಮಾರಂಭಕ್ಕೆ ಭಾಗವಹಿಸಿದರು.

Exit mobile version