Site icon Suddi Belthangady

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಸಾಸನ ಮಂಜೂರಾತಿ ಪತ್ರ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಶೇಡಿಮನೆ ಕೋರ್ಟ್ ರಸ್ತೆಯಲ್ಲಿರುವ ಜಗನ್ನಾಥ ಶೆಟ್ಟಿ ಅವರ 2 ಕಾಲು ಸ್ವಾಧೀನ ಕಳೆದುಕೊಂಡಿದ್ದು, ಅವರ ಪತ್ನಿ ಲಲಿತ ರವರು ಎರಡು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ.

ಅವರ ಕುಟುಂಬ ಆರ್ಥಿಕವಾಗಿ ದುರ್ಬಲರಾಗಿದ್ದು ಕುಟುಂಬದಲ್ಲಿ ದುಡಿಯುವ ಸದಸ್ಯರು ಯಾರು ಇಲ್ಲದೇ ಇದ್ದು ಯೋಜನೆಯ ವತಿಯಿಂದ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರತಿ ತಿಂಗಳು ರೂ.1000/-ದಂತೆ ಸಹಾಯದನ ಮಂಜೂರು ಮಾಡಿದ್ದಾರೆ.

ಸದ್ರಿ ಕುಟುಂಬಕ್ಕೆ ಮಂಜುರಾತ್ರಿ ಪತ್ರವನ್ನು ವಿಚಾರಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಪ್ರಗತಿಬಂದು ಒಕ್ಕೂಟದ ಅಧ್ಯಕ್ಷ ಸೀತಾರಾಮ್, ಕಣ್ಣಾಜೆ ಒಕ್ಕೂಟದ ಅಧ್ಯಕ್ಷ ಯಶೋಧ ಬೆಳ್ತಂಗಡಿ ಬಿ ಒಕ್ಕೂಟದ ಅಧ್ಯಕ್ಷ ಚರಣ್, ಬೆಳ್ತಂಗಡಿ ವಲಯದ ಮೇಲ್ವಿಚಾರಕ ಹರೀಶ್ ಗೌಡ, ಬೆಳ್ತಂಗಡಿ ಬಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜ್ಯೋತಿ ಉಪಸ್ಥಿತರಿದ್ದರು.

Exit mobile version