Site icon Suddi Belthangady

ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ- ಬೈಕ್‌ ಸವಾರ ರೆಖ್ಯ ಪರಕ್ಕಳದ ಯುವಕ ಥೋಮಸ್ ಮೃತ್ಯು

ರೆಖ್ಯ: ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ರೆಖ್ಯ ಸಮೀಪದ ಎಂಜಿರದ ಪರಕ್ಕಳದ ಯುವಕ ಥೋಮಸ್ ಸಾವನ್ನಪ್ಪಿದ್ದಾರೆ.

ನರ್ಸಿಂಗ್‌ ವಿದ್ಯಾರ್ಥಿಯಾಗಿರುವ ಥೋಮಸ್ ಎಂಜಿರದ ಪರಕ್ಕಳದ ಸ್ನೇರಿಯಾ ಎಂಬವರ ಪುತ್ರ.

ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಥಾಮಸ್‌ ಮನೆಯಿಂದ ಬೈಕ್ ನಲ್ಲಿ ಬೆಂಗಳೂರಿಗೆ ತೆರಳಿದ್ದರು.

ಈ ವೇಳೆ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್‌ ಮಧ್ಯೆ ಅಪಘಾತವಾಗಿದೆ.

ಲಾರಿಯಡಿಗೆ ಬಿದ್ದು ಥಾಮಸ್ ಸಾವನ್ನಪ್ಪಿದ್ದಾರೆ.

Exit mobile version