Site icon Suddi Belthangady

ಬೆಳ್ತಂಗಡಿ: ಎಸ್ಸೆಸ್ಸೆಲ್ಸಿ ಸಾಧಕರಾದ ಚಿನ್ಮಯ್, ನೇಹಾ ಕೃಷ್ಣರಿಗೆ ಸನ್ಮಾನ

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬೆಳ್ತಂಗಡಿಯ ಶ್ರೀ ಧ.ಮಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಮತ್ತು ವಿದ್ಯಾರ್ಥಿನಿ ನೇಹಾ ಕೃಷ್ಣ ಇವರನ್ನು ಪ್ರಪುಲ್ಲ ನಗರದ ನಿವಾಸಿಗಳು ಮೇ 28ರಂದು ಉಪನ್ಯಾಸಕ ಗಣೇಶ್ ಭಟ್ ಮನೆಯಲ್ಲಿ ಸನ್ಮಾನಿಸಿದರು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಅಳದಂಗಡಿ, ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಸನ್ನಿ, ವಿಶ್ರಾಂತ ಪತ್ರಕರ್ತ ಪಿ.ಎಸ್. ಅಶೋಕ್, ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಮಂಜುನಾಥ್ ರೈ, ಕೊಯ್ಯೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಧಾಕೃಷ್ಣ, ನಿವೃತ್ತ ಟೆಲಿಕಾಂ ಉದ್ಯೋಗಿ ದಿನಕರ ಗೌಡ, ಹಾಸ್ಟೆಲ್ ವಾರ್ಡನ್ ಲೋಕೇಶ್, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್, ಪಶುವೈದಕೀಯ ಪರಿವೀಕ್ಷಕ ಶ್ರೀಧರ್, ಸುವರ್ಣ ಕಾಂಪ್ಲೆಕ್ಸ್ ಮಾಲಕರಾದ ಭಾನುಪ್ರಸನ್ನ ಮತ್ತು ಉಮೇಶ್ ಪೂಜಾರಿ, ಪೂಂಜಾಶ್ರೀ ಪ್ರಿಂಟರ್ಸ್ ಮಾಲಕ ಅತ್ಯುಕ್ತಿ, ಶಿಕ್ಷಕಿಯಾರಾದ ಕುಮುದಾ, ಪ್ರವೀಣಾ ಲಾಯಿಲ, ಮಾಲಿನಿ, ಅಮಿತಾ ಮತ್ತು ಹೇಮಾ ಎಂ. ರೈ, ಜಯಂತಿ, ಸುಜಾತಾ, ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.

Exit mobile version