Site icon Suddi Belthangady

ಅರಳು ಮಲ್ಲಿಗೆ ಹಾಗೂ ಕರ್ನಾಟಕ ಚೇತನ ಪ್ರಶಸ್ತಿಗೆ ಅರ್ಜಿ ಅಹ್ವಾನ

ಬೆಳ್ತಂಗಡಿ: ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಕನ್ನಡ ಕಲಾ ಪ್ರತಿಭೋತ್ಸವ 2024ರ ಅಂಗವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಚೇತನ ರಾಜ್ಯ ಪುರಸ್ಕಾರ ಹಾಗೂ ಭರತನಾಟ್ಯ, ಸಂಗೀತ, ಜನಪದ ನೃತ್ಯ, ಚಿತ್ರಕಲೆ, ಯಕ್ಷಗಾನ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಅರಳುಮಲ್ಲಿಗೆ ರಾಜ್ಯ ಪುರಸ್ಕಾರ ನೀಡಲಿದ್ದು, ಆಸಕ್ತರು ಇತ್ತೀಚಿನ ಭಾವಚಿತ್ರದೊಂದಿಗೆ ವಿವರಗಳನ್ನೊಳಗೊಂಡ ದಾಖಲೆಗಳನ್ನು ನಿರ್ದೇಶಕರು, ಜ್ಞಾನ ಮಂದಾರ ಅಕಾಡೆಮಿ – ನಂ.39 ಗಾಣಿಗರಹಳ್ಳಿ , ಚಿಕ್ಕ ಬಾಣವಾರ ಅಂಚೆ, ಬೆಂಗಳೂರು-560090 ಇಲ್ಲಿಗೆ ಜೂನ್ 05ರ ಒಳಗೆ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Exit mobile version