Site icon Suddi Belthangady

ಅಸಹಾಯಕ ಸ್ಥಿತಿಯಲ್ಲಿದ್ದ ಎರಡು ಕುಟುಂಬಕ್ಕೆ ನೆರವಾದ ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡ

ಕಳೆಂಜ: ಗ್ರಾಮದ ಕಾಂತ್ರೇಲು ಎಂಬಲ್ಲಿ ವಾಸವಾಗಿರುವ ಅರುಣ ತನ್ನ ಇಳಿ ವಯಸ್ಸಿನ ತಾಯಿ ಸುಂದರಿಯನ್ನು ಸಾಕುವ ಸಲುವಾಗಿ ಮದುವೆಯಾಗದೆ ಉಳಿದು ಕೂಲಿ ಕೆಲಸ ಮಾಡಿ ಬದುಕುತ್ತಿದ್ದು ಇತ್ತೀಚೆಗೆ ಅರುಣ ರವರು ಕಾಯಿಲೆಗೆ ತುತ್ತಾಗಿದ್ದು ಇವರ ಚಿಕಿತ್ಸೆಗೆ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ 45,000/-ರೂ ಗಳನ್ನು ಸಂಗ್ರಹಿಸಿ ಹಸ್ತಾಂತರಿಸಿದರು.

ಹಾಗೆಯೇ ಕಳೆಂಜ ಗ್ರಾಮದ ಶಿಬರಾಜೆ ಪಾದೆ ಎಂಬಲ್ಲಿ ಸುಮಾರು 80 ವರ್ಷ ಪ್ರಾಯದ ಸೀತಮ್ಮ ವಾಸವಾಗಿದ್ದು ಅನಾರೋಗ್ಯ ಪೀಡಿತರಾಗಿರುತ್ತಾರೆ. ಅವರ ಮಗಳು ಜಯಂತಿ (60 ವರ್ಷ) ಜಾರಿ ಬಿದ್ದು ಕಾಲಿನ ಶಸ್ತ್ರಕ್ರಿಯೆಗೆ ಒಳಪಟ್ಟು ಮನೆಯಲ್ಲಿರುತ್ತಾರೆ.

ಜಯಂತಿ ಯವರ ಮಗ ಅಶ್ವತ್ ಮರದಿಂದ ಬಿದ್ದು ಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿ ಮನೆಯಲ್ಲಿರುತ್ತಾರೆ. ಇವರ ಚಿಕಿತ್ಸೆಗೆ ಕ್ರಿಶ್ಚಿಯನ್ ಬ್ರದರ್ಸ್ ಸಂಘದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ 30.000/-ರೂ ಗಳನ್ನು ಸಂಗ್ರಹಿಸಿ ಹಸ್ತಾಂತರಿಸಿದರು.

Exit mobile version