Site icon Suddi Belthangady

ಅರಸಿನಮಕ್ಕಿ: ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ

ಅರಸಿನಮಕ್ಕಿ: ತಾಲೂಕು ಚಿತ್ಪಾವನ ಸಂಘಟನೆ ವತಿಯಿಂದ ಅರಸಿನಮಕ್ಕಿಯ ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು.

ರಘುನಾಥ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಭೀಷ್ಮಪ್ರತಿಜ್ಞೆ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಶಾಲಿನಿ ಹೆಬ್ಬಾರ್ ಮದ್ದಳೆಯಲ್ಲಿ ವರುಣ್ ಹೆಬ್ಬಾರ್ ಚಂಡೆಯಲ್ಲಿ ಶ್ರೇಯಸ್ ಪಾಳಂದ್ಯೆ ಭಾಗವಹಿಸಿದರು.

ಮುಮ್ಮೇಳರದಲ್ಲಿ ದಿನಕರ ಗೋಖಲೆ, ಮಹಾದೇವ ಶೆಂಡ್ಯೆ, ವರದ ಶಂಕರ ದಾಮ್ಲೆ, ನಾರಾಯಣ ಫಡಕೆ ಪಾತ್ರಗಳನ್ನು ನಿರ್ವಹಿಸಿದರು.

ಏಕಾಂಗಿಯಾಗಿ ಬಾವಿ ತೋಡಿದ ಶಿಬಾಜೆ ವಿಶ್ವನಾಥ ಶೆಂಡ್ಯೆ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಗಜಾನನ ಅಭ್ಯಂಕರ ನರಸಿಂಹ ಪಾಳಂದ್ಯೆ ಮತ್ತಿತರರು ಸಹಕರಿಸಿದರು.

Exit mobile version