Site icon Suddi Belthangady

ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ‘ಸೌಖ್ಯವನ’ ಪರೀಕ ಆಸ್ಪತ್ರೆಗೆ ಮಾಹೆ ಮಣಿಪಾಲದ ಅಧಿಕಾರಿಗಳ ಭೇಟಿ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು  ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕ ಇಲ್ಲಿಗೆ ಮಾಹೆ ಮಣಿಪಾಲದ ಪ್ರೊ|ಚಾನ್ಸೆಲರ್ ರವರಾದ ಡಾ|ಎಚ್.ಎಸ್.ಬಲ್ಲಾಳ್, ವೈಸ್ ಚಾನ್ಸೆಲರ್ ರವರಾದ ಕ್ಯಾ- ಡಾ|ಎಂ.ಡಿ.ವೆಂಕಟೇಶ್, ಡೀನ್ ರಾದ ಡಾ|ಶರತ್ ರಾವ್ ಮತ್ತು ಡಾ|ಪದ್ಮರಾಜ್ ಹೆಗ್ಡೆ ಮೆಡಿಕಲ್ ಸುಪರಿಂಡೆಂಟ್ ರಾದ ಡಾ|ಅವಿನಾಶ್ ಶೆಟ್ಟಿ ಮತ್ತು ಡಾ|ಶಶಿಕಿರಣ್ ಉಮಾಕಾಂತ್ ರವರು ಭೇಟಿ ನೀಡಿ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ವೀಕ್ಷಿಸಿದರು.

ನಂತರ ಬೋರ್ಡ್ ರೂಮ್ ನಲ್ಲಿ ವೈದ್ಯಾಧಿಕಾರಿಗಳು, ಕಿರಿಯ ವೈದ್ಯರು ಮತ್ತು ಆಡಳಿತ ವಿಭಾಗದ ಸಿಬ್ಬಂದಿಗಳಿಗೆ ನೀಡಿದ ನುಡಿಯಲ್ಲಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಮಣಿಪಾಲದ ಪೈ ಗ್ರೂಪ್ ನವರಿಗೆ ಇರುವ ಉತ್ತಮ ಬಾಂಧವ್ಯದ ಬಗ್ಗೆ ತಿಳಿಸಿ ಡಾ.ಹೆಗ್ಗಡೆಯವರು ವೈದ್ಯಕೀಯ ಲೋಕಕ್ಕೆ ಸ್ಥಾಪಿಸಿದ ಎಲ್ಲಾ ಸಂಸ್ಥೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ನಾನು ಕೂಡ ಆಯುರ್ವೇದ ಮೆಡಿಸಿನ್ ಮತ್ತು ಅದರ ಉಪಯೋಗವನ್ನು ಮಾಡಿದ್ದೇನೆ ಎಂದು ತಿಳಿಸಿದರು.

ವೈಸ್ ಚಾನ್ಸೆಲರ್ ರವರದ ಡಾಕ್ಟರ್ ಎಂ.ಡಿ ವೆಂಕಟೇಶ್ ರವರೂ ಕೂಡ ಮಾತನಾಡಿ ತಮ್ಮ ಶುಭ ಸಂದೇಶ ನೀಡಿದರು.

ಈ ಸಮಯದಲ್ಲಿ ಶಾಂತಿ ವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ರವರು ಉಪಸ್ಥಿತರಿದು ಎಲ್ಲರನ್ನು ಗೌರವಿಸಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|ಗೋಪಾಲ್ ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು.

ವ್ಯವಸ್ಥಾಪಕ ಪ್ರವೀಣ್ ಕುಮಾರ್ ರವರು ಎಲ್ಲರಿಗೂ ಧನ್ಯವಾದವಿತ್ತರು.

Exit mobile version