Site icon Suddi Belthangady

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹಿರಿಯ ಶ್ರೇಣಿ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ವಕೀಲರ ಭವನದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧೀಶ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ ನಡೆಯಿತು.

ಅಧ್ಯಕ್ಷತೆಯನ್ನು ವಸಂತ ಮರಕಡ ವಹಿಸಿಕೊಂಡರು.

ಮುಖ್ಯ ಅಥಿತಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ ಜೆ, ಹಿರಿಯ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಎ ಜಿ ಪಿ, ಮನೋಹರ್ ಕುಮಾರ್ ಎಂ ಮತ್ತು ಎ ಪಿ ಪಿ ಯವರಾದ ದಿವ್ಯಾರಾಜ್ ಹೆಗ್ಡೆ ಮತ್ತು ಆಶೀತಾ ರವರು ಮತ್ತು ವಕೀಲರ ಸಂಘದ ಇದರ ಪದಾಧಿಕಾರಿಗಳು, ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು‌.

ಶಶಿಧರ ಎಂ.ಗೌಡ, ಕೃಷಿ ಕುಟುಂಬದಿಂದ ಬಂದವರಾಗಿದ್ದು, ಎಂ ಎ ( ಇಂಗ್ಲಿಷ್ ), ಬಿಎ, ಎಲ್ ಎಲ್ ಬಿ ಪದವಿಯನ್ನು ದಾವಣಗೆರೆಯಲ್ಲಿ ಪೂರೈಸಿರುತ್ತಾರೆ.ಪತ್ನಿ ಸುನಿತಾ ಆರ್ ಬೈಲಹೊಂಗಲ ನ್ಯಾಯಾಲಯದಲ್ಲಿ ಎಪಿಪಿ ಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಮಗಳು ಸೃಷ್ಟಿ, ಮಗ ಜಾಗೃತ್ ಗೌಡ.ಸವದತ್ತಿ ನ್ಯಾಯಾಲಯದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

ನವೀನ್ ಬಿ ಕೆ ಸ್ವಾಗತಿಸಿ, ಸಂದೀಪ್ ಡಿ’ಸೋಜ ಧನ್ಯವಾದವಿತ್ತರು.

Exit mobile version