Site icon Suddi Belthangady

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ನೂತನ ಆಡಳಿತ ಮಂಡಳಿ ಪದಗ್ರಹಣ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ನೂತನ ಆಡಳಿತ ಮಂಡಳಿ ಇಂದು ಅಸ್ತಿತ್ವಕ್ಕೆ ಬಂದಿದೆ. ಮೇ.26ರಂದು ನಡೆದ ಕಾರ್ಯಕ್ರಮದಲ್ಲಿ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ನೂತನ ಟ್ರಸ್ಟಿಗಳಿಗೆ ಪ್ರಮಾಣ ವಚನವನ್ನು ಬೋದಿಸಿದರು.

ನೂತನ ಟ್ರಸ್ಟಿಗಳಾಗಿ ನಿವೃತ್ತ ಸೈನಿಕ ಅಲೆಕ್ಸ್ ಚೆಂಪಿತ್ತಾನಮ್, ಆಲ್ಬಿನ್ ಕೈದಮಟ್ಟಮ್, ಶಿಬು ಪನಚಿಕ್ಕಲ್, ಜೋಬಿನ್ ಪರಪರಾಗತ್, ಕಾರ್ಯದರ್ಶಿಯಾಗಿ ಜೆಸಿಂತ ಕೆ.ಜೆ ಹಾಗೂ ಸುರೇಶ್ ಜಾರ್ಜ್ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಟ್ರಸ್ಟಿಗಳಾದ ಈಪನ್ ವರ್ಗೀಸ್, ಟೊಮಿ ಮಟ್ಟಮ್, ಬಿಜು ಪೆರು೦ಪಳ್ಳಿ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Exit mobile version