Site icon Suddi Belthangady

ಕೊಕ್ಕಡ ಜೇಸಿಐ ಕಪಿಲಾ ಆಶ್ರಯದಲ್ಲಿ ಚಿಣ್ಣರ ಲೋಕ-2024 ಶಿಬಿರ ಉದ್ಘಾಟನೆ

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದಲ್ಲಿ ಜೇಸಿಐ ಕೊಕ್ಕಡ ಕಪಿಲಾ ಇದರ ಆಶ್ರಯದಲ್ಲಿ “ಚಿಣ್ಣರ ಲೋಕ -2024 ” ಶಿಬಿರವನ್ನು ಝೋನ್ ಡೈರೆಕ್ಟರ್ ಜೆ ಸಿ ಭರತ್ ಶೆಟ್ಟಿ ಉದ್ಘಾಟಿಸಿದರು.

ಜೇಸಿಐ ಕೊಕ್ಕಡ ಕಪಿಲಾ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇದರ ನೇತೃತ್ವದಲ್ಲಿ ಪ್ರಪ್ರಥಮ ಬೇಸಿಗೆ ಶಿಬಿರ “ಚಿಣ್ಣರ ಲೋಕ ಆಯೋಜಿಸಿರುವುದು ತುಂಬಾ ಖುಷಿಯ ವಿಚಾರ ಈ ಶಿಬಿರದಲ್ಲಿ ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ ಬೇರೆಯದೇ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ.ಮಕ್ಕಳ ಬೇಸಿಗೆಯ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಮತ್ತು ಯಾರಿಗೆ ಮಕ್ಕಳ ಕಲಿಕೆಗೆ ಪ್ರೇರಣೆ ಮತ್ತು ಪೂರಕವಾಗುವ ಉದ್ದೇಶದಿಂದ ಶಿಬಿರದಲ್ಲಿ ಕ್ರಾಫ್ಟ್, ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್, ಭಾಷಣ ಕಲೆ, ಸಂಸ್ಕೃತಿಯ ಪರಿಚಯ, ಜಾನಪದ ಹಾಡು, ಹಾಗೂ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವಿಕೆ, ಇತ್ಯಾದಿಗಳನ್ನು ಹೇಳಿಕೊಡುವುದು ಮಕ್ಕಳ ಹಿತದೃಷ್ಟಿಯಲ್ಲಿ ಒಳ್ಳೆಯದು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಚಂಪಾ ಜೈನ್, ಸನ್ಮತಿ ನಿಲಯ ಉಜಿರೆ, ಗಂಗಾಧರ ಬಂಡಾರಿ ಕಾಯರ್ತಡ್ಕ, ಚೇತನಾ ಎಮ್, ಶಿಕ್ಷಣ ಸಂಯೋಜಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಮತ್ತು ರಾಜಾರಾಮ್ ಟಿ, ಸಂಗಮನಗರ ಇವರಿಂದ ತರಬೇತಿ ನಡೆಯುತ್ತಿದೆ.

ವೇದಿಕೆಯಲ್ಲಿ ಜೆಸಿ ಭರತ್ ಶೆಟ್ಟಿ ಝೋನ್ ಡೈರೆಕ್ಟರ್, ಜೆಸಿ ಹೆಚ್ ಜಿ ಎಫ್ ಜೋಸೆಫ್ ಪಿರೇರಾ ಮಾರ್ಗದರ್ಶಕರು, ಜೆಸಿಐ ಕೊಕ್ಕಡ ಕಪಿಲಾ,ಸಂತೋಷ್ ಜೈನ್ ಅಧ್ಯಕ್ಷರು ಜೇಸಿಐ ಕೊಕ್ಕಡ ಕಪಿಲಾ, ಜೆಸಿ ಅಕ್ಷತ್ ರೈ ಕಾರ್ಯದರ್ಶಿ, JCI Sen. ಜಿತೇಶ್ ಎಲ್ ಪಿರೇರಾ ನಿಕಟಪೂರ್ವಾಧ್ಯಕ್ಷ, ಕಾರ್ಯಕ್ರಮದ ಯೋಜನಾ ನಿರ್ದೇಶಕಿ ಶೋಭಾ ಪಿ, ಹರ್ಷಿತ್ JJC ಅಧ್ಯಕ್ಷರು, JCLT ವಿವಿಯನ್ ಸುವಾರಿಸ್, JCLT ಅಧ್ಯಕ್ಷರು ಹಾಗು ಸರ್ವಸದಸ್ಯರು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ಶ್ರೀಧರ ರಾವ್ ಕಾಯಡ, ಉಪಸ್ಥಿತರಿದ್ದರು.

Exit mobile version