Site icon Suddi Belthangady

ಮದ್ದಡ್ಕ: ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ

ಕುವೆಟ್ಟು: ಮದ್ದಡ್ಕ ಸಮೀಪ ಅಂಬುಲೆನ್ಸ್ ಮತ್ತು ಆಪೆ ಆಟೋ ರಿಕ್ಷಾ ಡಿಕ್ಕಿಯಾಗಿದ್ದು, ರಿಕ್ಷಾದ ಹಿಂದೆಯಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ರಿಕ್ಷಕ್ಕೆ ಡಿಕ್ಕಿಯಾದ ಘಟನೆ ಮೇ 24ರಂದು ಸಾಯಂಕಾಲ ನಡೆದಿದೆ.

ಅಂಬುಲೆನ್ಸ್ ಕೊಟ್ಟಿಗೆಹಾರ ಸಮಿಪ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರಿಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಆಟೋ ರಿಕ್ಷಾ ಮತ್ತು ಬಸ್ಸು ಬೆಳ್ತಂಗಡಿ ಕಡೆ ಬರುತ್ತಿತ್ತು ಅಂಬುಲೆನ್ಸ್ ಚಾಲಕನಿಗೆ ಮತ್ತು ಆಟೋ ಚಾಲಕನಿಗೆ ಗಾಯವಾಗಿದ್ದು ಗುರುವಾಯನಕೆರೆ ಖಾಸಾಗಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಂಬುಲೆನ್ಸ್ ನಲ್ಲಿದ್ದವರನ್ನು ಬೇರೆ ಅಂಬುಲೆನ್ಸ್ ನಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ.

Exit mobile version