Site icon Suddi Belthangady

ಕೊಕ್ಕಡ: ಉಪ್ಪಾರು ಮನೆಯ ಅನಂತರಾಮ ಉಪ್ಪಾರ್ಣ ನಿಧನ

ಕೊಕ್ಕಡ: ಕೊಕ್ಕಡ ಗ್ರಾಮದ ಉಪ್ಪಾರು ಮನೆಯ ಅನಂತರಾಮ ಉಪ್ಪಾರ್ಣ (95 ವ) ಅಲ್ಪಕಾಲದ ಅಸೌಖ್ಯದಿಂದ (ಇಂದು)ಮೇ 23ರ ಮುಂಜಾನೆ ನಿಧನರಾದರು.

ಮೃತರು ಪುತ್ರರಾದ ನೆಲ್ಯಾಡಿ ಶ್ರೀನಿಧಿ ಫೈನಾನ್ಸ್ ಮತ್ತು ಶ್ರೀನಿಧಿ ಬಯೋಪ್ಲೇಟ್ಸ್ ಮಾಲಕ ಸುಬ್ರಹ್ಮಣ್ಯ ಉಪ್ಪಾರ್ಣ, ಶ್ರೀನಿಧಿ ಪ್ರಿಂಟರ್ಸ್ ಮತ್ತು ಗ್ರಾಫಿಕ್ಸ್ ನ ಮಾಲಕ ರಾಜೇಂದ್ರ ಪ್ರಸಾದ್ ಉಪ್ಪಾರ್ಣ, ಬೆಂಗಳೂರು ವಿದ್ಯಾಪೀಠದಲ್ಲಿ ಅರ್ಚಕರಾಗಿರುವ ಶ್ರೀನಿವಾಸ ಮೂರ್ತಿ ಉಪ್ಪಾರ್ಣ ಹಾಗೂ ಮೂವರು ಪುತ್ರಿಯರಾದ ಮಾಧವಿ, ಮಂಜುಳಾ, ಭಾರತಿ ಮತ್ತು ಸೊಸೆಯಂದಿರಾದ ನಿರ್ಮಲ, ಮಮತಾ, ಸುಜಾತ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version