Site icon Suddi Belthangady

ಮಾಜಿ ಶಾಸಕ ವಸಂತ ಬಂಗೇರ ಉತ್ತರ ಕ್ರಿಯೆ- ಮುಖ್ಯಮಂತ್ರಿ ಸಿದ್ದರಾಮಯ್ಯ, ಗಣ್ಯರು, ಸಾವಿರಾರು ಅಭಿಮಾನಿಗಳು ಭಾಗಿ

ಗುರುವಾಯನಕೆರೆ : ಮೇ 8ರಂದು ನಿಧನರಾದ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರರ ಉತ್ತರ ಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮ ಮೇ 21ರಂದು ಕುವೆಟ್ಟು ಗುರುವಾಯನಕೆರೆ ಮಂಜಿಬೆಟ್ಟು ಎಫ್.ಎಂ ಗಾರ್ಡನ್ ನಲ್ಲಿ ಜರಗಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ ಸೇರಿದಂತೆ ಹಲವು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಅಭಿಮಾನಿಗಳು, ಹಿತೈಷಿಗಳು ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.

ಪತ್ನಿ ಸುಜಿತಾ ವಿ.ಬಂಗೇರ, ಪುತ್ರಿಯರಾದ ಪ್ರೀತಿತಾ ವಿಜೇತ್, ಬಿನುತಾ ಬಂಗೇರ, ಅಳಿಯಂದಿರಾದ ಧರ್ಮವಿಜೇತ್, ಸಂಜೀವ್ ಕಣೇಕಲ್, ಮೊಮ್ಮಕ್ಕಳಾದ ಪೂರ್ವಿಕಾ, ವೇದಾಂತ್ ಸುಬ್ರಹ್ಮಣ್ಯ, ಸೃಷ್ಟಿ, ಸಹೋದರಾದ ಮಾಜಿ ಶಾಸಕ ಪ್ರಭಾಕರ ಬಂಗೇರ, ಕೆ.ರಮೇಶ್ ಬಂಗೇರ, ಸಹೋದರಿ ಶಾರದಾ, ಕುಟುಂಬಸ್ಥರು ಹಾಜರಿದ್ದರು.

Exit mobile version