Site icon Suddi Belthangady

ಚಾರ್ಮಾಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ವಸಂತ ಬಂಗೇರರಿಗೆ ನುಡಿ ನಮನ

ಚಾರ್ಮಾಡಿ: ಮೇ 8ರಂದು ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ಮೇ 20ರಂದು ಚಾರ್ಮಾಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಯಶೋಧರ ವಳಸರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಂ, ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್, ತಾಲೂಕು ಸಂಘದ ನಿರ್ದೇಶಕಿ ನಮಿತಾ ತೋಟತ್ತಾಡಿ, ಗುರುರಾಜ್ ಗುರಿಪಲ್ಲ, ಸುನಿಲ್ ಕನ್ಯಾಡಿ., ಸದಾಶಿವ ಕೋಟ್ಯಾನ್, ಚಾರ್ಮಾಡಿ ಸಂಘದ ಹಿರಿಯರಾದ ನಾರಾಯಣ ಪೂಜಾರಿ ಬೀಮಂಡ, ಬಾಬುಪೂಜಾರಿ ವಳಸರಿ, ಕೇಶವತಿ ಬೀಮಂಡೆ, ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

ಸಂಘದ ಕಾರ್ಯದರ್ಶಿ ರಾಜೇಶ್ ಬಂಗ್ಲೆ ಗುಡ್ಡೆ ವಂದಿಸಿದರು, ರಾಜೇಶ್ ಅಶ್ವತ್ತದಡಿ ನಿರೂಪಿಸಿದರು.

Exit mobile version