Site icon Suddi Belthangady

ಕಳೆಂಜ: ಸಂಘ ಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

ಕಳೆಂಜ: ಕಳೆoಜ ಗ್ರಾಮದ ಮಾಣಿಗೇರಿ ಬಳಿಯ ನಿವಾಸಿ ಅಂಬಿಕಾ ಕೂಲಿ ಕೆಲಸ ಮಾಡಿ ಪುಟ್ಟ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು.

ಇವರ ಗುಡಿಸಲು ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ಸಂಘ ಪರಿವಾರದ ಕಾರ್ಯಕರ್ತರು ಶ್ರಮದಾನ ಮೂಲಕ ದಾನಿಗಳ ನೆರವಿನಿಂದ ಬೇಕಾಗುವ ಸಾಮಾಗ್ರಿಗಳನ್ನು ಸಂಗ್ರಹಣೆ ಮಾಡಿ ಒಂದು ತಾತ್ಕಾಲಿಕ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರಾದ ಗಣೇಶ್ ಕಾಯರ್ತಡ್ಕ, ಉಮೇಶ್ ನಿಡ್ಡಾಜೆ, ಹರೀಶ್ ಕೊಯಿಲ, ನಿತಿನ್ ಅಶ್ವತ್ತಡಿ, ಮಂಜುನಾಥ ಗೌಡ ಹಾರಿತ್ತಕಜೆ, ಮುರ್ಗನ್ ಪ್ರಸಾದ್, ಗಣೇಶ್ ಎಂ. ಕೆ ನಿಡ್ಡಾಜೆ, ಪ್ರಕಾಶ್ ಆಚಾರಿ ಮಾಣಿಗೇರಿ, ಕಮಲು ಎಲಿಮಾರು ಉಪಸ್ಥಿತರಿದ್ದರು.

Exit mobile version