Site icon Suddi Belthangady

ಕೊಕ್ರಾಡಿ: ಶಾಖಾ ನಿವೃತ್ತಿ ಅಂಚೆ ಪಾಲಕ ಅಮ್ಮು ಶೆಟ್ಟಿಯವರಿಗೆ ಹಾಗು ಉಪ್ಪಿಂಗಡಿ ಅಂಚೆ ಕಚೇರಿಗೆ ವರ್ಗಾವಣೆಗೊಂಡ ವಿಶ್ವನಾಥ ರಿಗೆ ಬೀಳ್ಕೊಡುಗೆ

ಕೊಕ್ರಾಡಿ: ಕೊಕ್ರಾಡಿ ಶಾಖಾ ಅಂಚೆ ಕಚೇರಿಯ ನಿವೃತ್ತ ಉಪ ಅಂಚೆಪಾಲಕ ಅಮ್ಮು ಶೆಟ್ಟಿಯವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ವೇಣೂರು ಉಪ ಅಂಚೆ ಕಛೇರಿಯ ಅಂಚೆಪಾಲಕರಾಗಿದ್ದ ಇದೀಗ ಪದೋನ್ನತಿಗೊಂಡು ಉಪ್ಪಿಂಗಡಿ ಅಂಚೆ ಕಚೇರಿಗೆ ವರ್ಗಾವಣೆಗೊಂಡ ವಿಶ್ವನಾಥ ಇವರ ಬೀಳ್ಕೊಡುಗೆ ಸಮಾರಂಭ ವೇಣೂರು ಅಂಚೆ ಕಚೇರಿಯಲ್ಲಿ ಜರಗಿತು.

ಮೂಡುಕೋಡಿ ಶಾಖಾ ಅಂಚೆ ಕಚೇರಿ ಅಂಚೆಪಾಲಕಿ ಕುಮಾರಿ ಜೀವಿತ ಪ್ರಾರ್ಥಿಸಿದರು.ಮುಖ್ಯ ಅತಿಥಿಗಳಾಗಿ ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಭಾಗವಹಿಸಿದರು.

ವೇಣೂರು ಅಂಚೆ ಕಚೇರಿ ಹಾಗೂ ಅಂಡಿಂಜೆ, ಸಾವ್ಯಾ, ಕೊಕ್ರಾಡಿ, ಮೂಡುಕೋಡಿ, ಕರಿಮಣೇಲು, ಬಜಿರೆ, ನಿಟ್ಟಡೆ, ಕುಕ್ಕೇಡಿ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿ ವರ್ಗ ಹಾಗೂ ಊರವರು ಉಪಸ್ಥಿತರಿದ್ದು ಶುಭ ಹಾರೈಸಿದರು.ವೇಣೂರು ಅಂಚೆ ಕಚೇರಿಯ ಪ್ರಭಾರ ಅಂಚೆ ಪಾಲಕ ಉಮೇಶ್ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಬಜಿರೆ ಶಾಖಾ ಅಂಚೆ ಕಚೇರಿಯ ಅಂಚೆ ಪಾಲಕ ಭರತ್ ರಾಜ್ ವಂದಿಸಿದರು.

Exit mobile version