Site icon Suddi Belthangady

ಮಾಜಿ ಶಾಸಕ ಕೆ.ವಸಂತ ಬಂಗೇರರ ಮನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ

ಬೆಳ್ತಂಗಡಿ: ಮೇ 8ರಂದು ನಿಧನರಾದ ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರರ ಮನೆಗೆ ಮೇ 18ರಂದು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷ ಎಂ ಎಲ್ ಸಿ ಮಂಜುನಾಥ್ ಭಂಡಾರಿ ಭೇಟಿ ನೀಡಿದರು.

ಬಂಗೇರರ ಪತ್ನಿ ಸುಜಿತಾ ವಿ.ಬಂಗೇರ, ಪುತ್ರಿಯರಾದ ಪ್ರೀತಿತಾ ವಿಜೇತ್, ಬಿನುತಾ ಬಂಗೇರ, ಅಳಿಯಂದಿರಾದ ಧರ್ಮವಿಜೇತ್, ಸಂಜೀವ್ ಕಣೆಕಲ್, ಮೊಮ್ಮಕ್ಕಳಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪ ಮಾಜಿ ಉಪಾಧ್ಯಕ್ಷ ಧರಣೇ0ದ್ರ ಕುಮಾರ್, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಅಯೂಬ್ ಬಿ.ಕೆ, ನಗರ ಪಂಚಾಯತ್ ಸದಸ್ಯರುಗಳಾದ ಜಗದೀಶ್ ಡಿ., ಜನಾರ್ದನ, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಸುಬು, ಅನೂಪ್ ಬಂಗೇರ ಮದ್ದಡ್ಕ ಮೊದಲಾದವರು ಹಾಜರಿದ್ದರು.

Exit mobile version