Site icon Suddi Belthangady

ಪದ್ಮುಂಜ: ಎಸ್.ವೈ.ಎಸ್ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಪದ್ಮುಂಜ: ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಸಮಿತಿ ಅಧ್ಯಕ್ಷ ನಝೀರ್ ಮಲೆಂಗಲ್ ರವರ ಅಧ್ಯಕ್ಷತೆಯಲ್ಲಿ ಮೇ 16ರಂದು ಪದ್ಮುಂಜ ಖಲಂದರ್ ಷಾ ಮಸೀದಿಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೈಯದ್ ಇಂಬುಚ್ಚಿಕೋಯ ತಂಙಳ್ ರವರು ಸಮವಸ್ತ್ರ ವಿತರಣೆ ನಡೆಸಿದರು.

ಜಮಾಅತ್ ಅಧ್ಯಕ್ಷ ರಫೀಕ್ ಅಂತರ, ಪ್ರ.ಕಾರ್ಯದರ್ಶಿ ಕಾಸಿಂ ಪದ್ಮುಂಜ, ಝೋನ್ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಪದ್ಮುಂಜ, ಮಾಜಿ ಅಧ್ಯಕ್ಷ ಉಮರ್ ಫಾರೂಕ್ ಪದ್ಮುಂಜ, ಕಾರ್ಯದರ್ಶಿ ಅಶ್ರಫ್ ಪದ್ಮುಂಜ, ಕೋಶಾಧಿಕಾರಿ ರಮ್ಲಾನ್ ಮಲೆಂಗಲ್ಲು, ಅಬ್ದುರ್ರಹ್ಮಾನ್ ಪದ್ಮುಂಜ, ಮಸ್ ಊದ್ ಸ ಅದಿ ಉಜ್ರಿಬೊಟ್ಟು ಮದರಸ ಅಧ್ಯಾಪಕ ಅಬ್ದುರಶೀದ್ ಹಿಕಮಿ ಸೇರಿದಂತೆ ಜಮಾಅತ್ ನೇತಾರರು, ಮುಸ್ಲಿಂ ಜಮಾಅತ್, ಎಸ್.ವೈ.ಎಸ್.ಎಸ್.ಎಸ್.ಎಫ್ ನಾಯಕರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಪದ್ಮುಂಜ ಪ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ಅಫ್ರಾದ್ ಗೆ ಪದ್ಮುಂಜ ಎಸ್.ಎಸ್.ಎಫ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಖ್ಯ ಗುರುಗಳಾದ ಮುಹಮ್ಮದ್ ನಿಜಾಮುದ್ದೀನ್ ರವರು ಕಾರ್ಯಕ್ರಮ ಉದ್ಘಾಟಿಸಿ, ಫಾರೂಕ್ ಸ ಅದಿಯವರು ಸ್ವಾಗತಿಸಿ, ಮುಹಮ್ಮದ್ ಖಲಂದರ್ ರವರು ಧನ್ಯವಾದ ಸಲ್ಲಿಸಿದರು.

Exit mobile version