Site icon Suddi Belthangady

ಮಕ್ಕ ಮದೀನ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಸುದ್ದಿ ಪ್ರತಿನಿಧಿ ಕಾಸಿಂ ಪದ್ಮುಂಜ ರವರಿಗೆ ಬೀಳ್ಕೊಡುಗೆ ಸಮಾರಂಭ

ಪದ್ಮುಂಜ: ಪರಿಶುದ್ಧ ಮಕ್ಕ ಮದೀನ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಸುದ್ದಿ ಪ್ರತಿನಿಧಿ ಕಾಸಿಂ ಪದ್ಮುಂಜ ರವರಿಗೆ ಖಲಂದರ್ ಷಾ ಜಮಾಅತ್ ವತಿಯಿಂದ ಹಾಗೂ ಉರುವಾಲು ಸರ್ಕಲ್ ಕೆ ಎಂ ಜೆ ಮತ್ತು ಪದ್ಮುಂಜ ಕೆ ಎಂ ಜೆ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.

ಪದ್ಮುಂಜ ಜಮಾಅತ್ ಅಧ್ಯಕ್ಷ ರಫೀಕ್ ಅಂತರ, ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಪದ್ಮುಂಜ, ಕೊಶಾಧಿಕಾರಿ ಇಸುಬು ಹಾಜಿ ಅಂತರ, ಗುರುಗಳಾದ ಅಬ್ದುಲ್ ರಶೀದ್ ಹಿಕಮಿ, ಅಬೂಬಕ್ಕರ್ ಹಾಜಿ ಕೆ ಎಂ ಜೆ ಸರ್ಕಲ್, ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಝೋನ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಇಸ್ಮಾಯಿಲ್ ಹಾಜಿ ಮುರ, ಇಬ್ರಾಹಿಂ ಗೋಳ್ತಡಿ, ಸುಲೈಮಾನ್ ಉರುವಾಲು ಪದವು, ಸುಲೈಮಾನ್ ಪದ್ಮುಂಜ, ಸೈಫುದ್ದೀನ್ ಹಾಸಿಮಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುಹಮ್ಮದ್ ಖಲಂದರ್ ರವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Exit mobile version