Site icon Suddi Belthangady

ಬೆಳ್ತಂಗಡಿ: ವಿವೇಕ ಜಾಗ್ರತ ಬಳಗ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಮಳೆಗಾಗಿ ಪ್ರಾರ್ಥನೆ

ಬೆಳ್ತಂಗಡಿ: ಸ್ವಾಮಿ ವಿವೇಕಾನಂದ ಸಂಸ್ಥೆಯಾದ ಡಿವೈನ್ ಪ್ರಾಕ್ ಸಾಲಿಗ್ರಾಮ, ಇದರ ಅಂಗ ಸಂಸ್ಥೆಗಳಲ್ಲಿ ಒಂದಾದ ವಿವೇಕ ಜಾಗ್ರತ ಬಳಗ ಇದರ ಆಶ್ರಯದಲ್ಲಿ ಮಳೆಗಾಗಿ ವರುಣ ಮಂತ್ರ, ಜಪ, ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಮಳೆ ಬರಲು ಪ್ರಾರ್ಥನೆ ನಡೆಯುತ್ತಿದೆ.

ಡಿವೈನ್ ಪ್ರಾಕ್ ಮತ್ತು ಡಿವೈನ್ ಸ್ಪಾಕ್‌ನ ಮೂಲ ಉದ್ದೇಶ, ವ್ಯಕ್ತಿತ್ವ ನಿರ್ಮಾಣ ಮತ್ತು ಲೋಕ್ಕೋದ್ದಾರ.

ಈ ದಿಶೆಯಲ್ಲಿ ಸದ್ಗುರುವಾದ ಪೂಜ್ಯ ಚಂದ್ರಶೇಖರ್ ಉಡುಪ ಇವರ ಆಶೀರ್ವಾದದೊಂದಿಗೆ ಎ.17ರಿಂದ 27ರ ತನಕ ಮಳೆಗಾಗಿ ಪ್ರಾರ್ಥನೆ ನಡೆಯುತ್ತಿದೆ.

11 ದಿವಸ 11 ನಿಮಿಷ ಕಡಿಮೆ ಪಕ್ಷ 11 ಮಂದಿಯೊಂದಿಗೆ ಈ ಲೋಕ್ಕೋದ್ದಾರದ ಲೋಕ ಕಲ್ಯಾಣದ ಸೇವೆಗಳು ನಡೆಯುತ್ತಿದೆ.

ಬೆಳ್ತಂಗಡಿ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ, ಬಳಗದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯವರು ವಿನಂತಿ ಮಾಡಿದ್ದಾರೆ.

Exit mobile version