Site icon Suddi Belthangady

ಕೊಯ್ಯೂರು: ಮೈಂದಕೋಡಿಯಲ್ಲಿ‌ ಭಜನಾ ಕಮ್ಮಟೋತ್ಸವ ಹಾಗೂ ದೈವಗಳ ಗಗ್ಗರ ಸೇವೆ

ಕೊಯ್ಯೂರು: ಮೈಂದಕೋಡಿ ನಾರಾಯಣ ಗೌಡರ ಮನೆಯಲ್ಲಿ ಗ್ರಾಮದ ಆರು ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ, ನಂತರ ಸತ್ಯ ದೇವತೆ ಹಾಗೂ ಇನ್ನಿತರ ದೈವಗಳ ಗಗ್ಗರಸೇವೆ ಎ.16ರಂದು ನಡೆಯಿತು.

ತಾಲೂಕಿನಲ್ಲಿ ಪ್ರಥಮ ಬಾರಿಗೆ ನಾರಾಯಣ ಗೌಡರ ಖಾಸಗಿ ಕಾರ್ಯಕ್ರಮದಲ್ಲಿ ಭಕ್ತರಿಂದ ಅತ್ಯಂತ ಭಕ್ತಿ ಪೂರ್ವಕವಾಗಿ ನಡೆದ ಭಜನಾ ಕಮ್ಮಟೋತ್ಸವ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ.ಚಂದ್ರಶೇಖರ ಸಾಲಿಯಾನ್ ಕೊಯ್ಯೂರು ಮತ್ತು ಭಜನಾ ತರಬೇತಿದಾರ ವಿ.ಹರೀಶ್ ನೆರಿಯ ಇವರುಗಳ ಸಹಕಾರದೊಂದಿಗೆ ನಡೆದು ಜನರ ಮನ ಸೆಳೆಯಿತು.

ಈ ಭಜನಾ ಕಾರ್ಯಕ್ರಮದಿಂದ ಪ್ರೇರಿತರಾದ ಊರಿನ ಭಜನಾ ಅಭಿಮಾನಿಗಳು ತಮ್ಮ ಮನೆಯಲ್ಲಿಯೂ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಭಜನಾ ಕಮ್ಮಟೋತ್ಸವವನ್ನು ನಡೆಸಿಕೊಡುವಂತೆ ಸಂಯೋಜಕರುಗಳಲ್ಲಿ ವಿನಂತಿಸಿಕೊಂಡರು.

Exit mobile version