Site icon Suddi Belthangady

ಮರೋಡಿಯಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆ

ಮರೋಡಿ: ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮರೋಡಿಯ ಕಾಂಗ್ರೆಸ್ ಪಕ್ಷದ ಮುಖಂಡ ಅಬ್ದುಸ್ಸಲಾಂ ರವರ ಮನೆಯ ಸಭಾಂಗಣದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಬಂಗೇರ ಅಧ್ಯಕ್ಷತೆಯಲ್ಲಿ ನಡೆಯಿತು.

ರಕ್ಷಿತ್ ಶಿವರಾಂ ಮಾತಾಡಿ, ಆರ್ ಪದ್ಮರಾಜ್ ಪೂಜಾರಿ ಯವರು ಎನ್ ಜಿ ಓ ಮುಖಾನಂತರ ಸಾರ್ವಜನಿಕ ಸೇವೆಯಲ್ಲಿದ್ದವರು ಮತ್ತು 25 ವರ್ಷಗಳಕ್ಕಿಂತ ಅಧಿಕ ಕುದ್ರೋಳಿ ದೇವಸ್ಥಾನದಲ್ಲಿ ಜವಾಬ್ದಾರಿತ ಸ್ಥಾನದಲ್ಲಿ ಸೇವೆ ಮಾಡಿಕೊಂಡಿದ್ದವರು.ವಕೀಲ ವೃತ್ತಿಯಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದು ರಾಜಕೀಯದಲ್ಲಿಯೂ ಉನ್ನತ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸಿಸಮಾಜದ ಎಲ್ಲಾ ವರ್ಗದವರೊಂದಿಗೆ ಅನೋನ್ಯನಾಗಿದ್ದು ಅವರನ್ನು ಅತ್ಯಧಿಕ ಮತಗಳಿಂದ ಚುನಾಯಿಸುವನಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ವಿಶೇಷವಾಗಿ ಗೃಹಣಿಯರು ಕುಶಿಯಲ್ಲಿದ್ದು ಈ ಯೋಜನೆಯಿಂದ ಹೊರಗೆ ಇರುವ 4% ಗೃಹಣಿಯರ ವಿವರಗಳನ್ನು ಪಡೆದು ಬ್ಲಾಕ್ ಕಚೇರಿಗೆ ಕೊಡಬೇಕೆಂದು ಮನವಿ ಮಾಡಿದರು.
ಬೆಳ್ತಂಗಡಿ ವಿಸಭಾ ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್ ಮಾತಾಡಿ, ಈ ಸಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ಪದ್ಮರಾಜ್ ಗೆಲವು ಶತ ಸಿದ್ಧ ಆದರೂ ಕಾರ್ಯಕರ್ತರು ರಿಲ್ಯಾಕ್ಸ್ ಮಾಡಬಾರದೆಂದರು.

ಬೆಳ್ತಂಗಡಿ ವಿಧಾನ ಸಭಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್ ಕುಕ್ಕೆಡಿ, ಹಿರಿಯರು ಮಾಜಿ ಮಂಡಲ ಪ್ರಧಾನ ಅಬೂಸಾಲಿ ದೇವರಾಜ್ ಶೆಟ್ಟಿ, ಗೋಪಾಲ್ ಸೇರಿಗಾರ ,ಬ್ಲಾಕ್ ಕಾಂಗ್ರೆಸ್ ನಗರ ಉಪಾಧ್ಯಕ್ಷ ಮುನಿರಾಜ್ ಜೈನ್ ,ಯುವ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಧರ್ಣಪ್ಪ ಪೂಜಾರಿ, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಯುವ್ಜಿನ್ ಪಿರೇರಾ, ಫ್ರಾನ್ಸಿಸ್, ವಿಜಯ ಕುಮಾರ್ ಭಂಗ, ದಿವಾಕರ್ ಭಂಡಾರಿ, ರವಿರಾಜ್ ಬಲ್ಲಾಳ್, ಡಿ.ಕೆ. ಸೂರ್ಯನಾರಾಯಣ, ಲ್ಯಾಂಡ್ ಟ್ರಿಬ್ಯೂನಲ್ ಮೆಂಬರ್ ಇಸ್ಮಾಯಿಲ್ ಕೆ.ಪೆರಿಂಜೆ, ಕೆಳಗಿನ ಮನೆ ಅಣ್ಣಿ ಪೂಜಾರಿ, ಹಿರಿಯ ಕಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಬ್ದುಸ್ಸಲಾಂ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಹಿಸಿದ್ದರು.

Exit mobile version