Site icon Suddi Belthangady

ಮಡಂತ್ಯಾರಿನಲ್ಲಿ ಶ್ರೀ ದುರ್ಗಾ ಗ್ರ್ಯಾಂಡ್ ಹೋಟೆಲ್ ಶುಭಾರಂಭ

ಮಡಂತ್ಯಾರು: ಬೆಳ್ತಂಗಡಿ ಶ್ರೀ ದುರ್ಗಾ ಗ್ರ್ಯಾಂಡ್ ಮತ್ತು ಶ್ರೀ ದುರ್ಗಾ ಡೆಲಿಕಸಿ ಹೋಟೆಲ್ ಮಾಲಕರಾದ ಯಶೋಧರ ಬಂಗೇರ ಮತ್ತು ಪ್ರವೀಣ್ ರವರು ಮಡಂತ್ಯಾರ್ ನಲ್ಲಿ ಆರಂಭಿಸಿರುವ ಹೋಟೆಲ್ ಶ್ರೀ ದುರ್ಗಾ ಗ್ರ್ಯಾಂಡ್ ಪ್ರಾರಂಭಗೊಂಡಿದೆ.

ಮಡಂತ್ಯಾರಿನ ಪೊಂಪೈ ಆರ್ಕೇಡ್ ನಲ್ಲಿ ನಿರ್ಮಿಸಲಾಗಿರುವ ಶುದ್ಧ ಸಸ್ಯಾಹಾರಿ ಹೋಟೆಲನ್ನು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

ಸೇಕ್ರೇಡ್ ಹಾರ್ಟ್ ಚರ್ಚ್ ಮಡಂತ್ಯಾರ್ ಇದರ ಧರ್ಮಗುರುಗಳಾದ ಸ್ಟ್ಯಾನಿ ಗೋವಿಯಸ್, ಮಡಂತ್ಯಾರ್ ನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ಪಾರೆಂಕಿ ಇದರ ಪ್ರಧಾನ ಅರ್ಚಕ ಶ್ರೀಧರ ರಾವ್, ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಗೌರವ ಉಪಸ್ಥಿತಿಯಿದ್ದು ಶುಭ ಹಾರೈಸಿದರು.

ಪೊಂಪೈ ಆರ್ಕೇಡ್ ಮಾಲಕರಾದ ಜೇಸನ್ ರೋಡ್ರಿಗಸ್, ಮಡಂತ್ಯಾರ್-ಪುಂಜಾಲಕಟ್ಟೆ ವರ್ತಕರ ಸಂಘದ ಅಧ್ಯಕ್ಷರಾದ ಜಯಂತಿಶೆಟ್ಟಿ ಭಂಡಾರಿಗುಡ್ಡೆ, ಮಾಲಾಡಿ ಗ್ರಾ.ಪಂ.ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರ್ ಗ್ರಾ.ಪಂ.ಅಧ್ಯಕ್ಷ ರೂಪಾ ಎ.ಎಸ್, ಚೀಫ್ ಇಂಜಿನಿಯ್ ಕೆಪಿಟಿ ಮಂಗಳೂರಿನ ಸಚಿನ್ ರಾಜ್, ನೂತನ್ ಕ್ಲೋತ್ ಸೆಂಟರ್ ನ ಪ್ರಕಾಶ್ ರೋಡ್ರಿಗಸ್, ಬದುಕು ಕಟ್ಟೋಣ ಬನ್ನಿ ತಂಡದ ಮುಖಂಡ, ಉದ್ಯಮಿ ರಾಜೇಶ್ ಪೈ, ಸುದ್ದಿ ಬಿಡುಗಡೆಯ ಮಾಲಕರಾದ ಡಾ.ಯು.ಪಿ.ಶಿವಾನಂದ್, ವರ್ತಕರ ಸಂಘದ ಉಪಾಧ್ಯಕ್ಷ ಯೋಗೀಶ್ ಕಡ್ತಿಲ, ಗಣ್ಯರಾದ ಸತೀಶ ಹೊಸಮನೆ, ವಿಶ್ವನಾಥ್, ಕಿಶೋರ್ ಶೆಟ್ಟಿ, ಸತೀಶ್ ಕಜತ್ತಾರು, ಡಾ.ಸೆರಾ, ಅಶೋಕ್ ಗುಂಡ್ಯಲ್ಕೆ ಮುಂತಾದವರು ಉಪಸ್ಥಿತರಿದ್ದರು. ಸುದ್ದಿ ವಾಹಿನಿಯ ಮುಖ್ಯಸ್ಥ ದಾಮೋದರ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version