Site icon Suddi Belthangady

ಮೂಡುಕೋಡಿ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಅಂಬೇಡ್ಕರ್ ಜಯಂತಿ

ಮೂಡುಕೋಡಿ: ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಎ.14ರಂದು ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ದೈವಸ್ಥಾನದ ಹಿರಿಯರಾದ ಬಾಬು ಕಲ್ಯರಡ್ಡ, ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ.ಪಾಯಸ್ ದೀಪ ಬೆಳಗಿಸಿದರು. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾಚ೯ನೆ ಗೈದು ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ಅಂಬೇಡ್ಕರ್ ಅವರು ದೀನ ದಲಿತರ ಶೋಷಿತ ವಗ೯ದ ಧ್ವನಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕೂಚ ಹೊಸಮನೆ, ಚಂದ್ರಶೇಖರ್ ಕೊಪ್ಪದ ಬಾಕಿಮಾರು, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚ೦ದ್ರಾವತಿ ಅಶೋಕ್ ಹೆಗ್ಡೆ ಬೆದ್ರಡ್ಧ, ಪ್ರಮುಖರಾದ ಸುಧಾಕರ ಹೊಸಮನೆ, ಶಶಿಧರ ಹೊಸಮನೆ, ಗಜೇಂದ್ರ ಪಾಲ್ದಡ್ಕ, ಆನಂದ ಪಾದೆಮನೆ, ಸದಾನಂದ ಹೊಸಮನೆ, ಗೀತಾ ಕೊಪ್ಪದ ಬಾಕಿಮಾರು, ಶೋಭಾ ಕಲ್ಯರಡ್ಧ, ಪ್ರಶಾಂತ್ ಹೊಸಮನೆ ಸೇರಿ ಹಲವರು ಉಪಸ್ಥಿತರಿದ್ದರು.

ದೈವಸ್ಥಾನ ಸದಸ್ಯ ಧರ್ಮರಾಜ್ ಕೊಪ್ಪದ ಬಾಕಿಮಾರು ಸ್ವಾಗತಿಸಿ ನಿರೂಪಿಸಿದರು .

Exit mobile version