Site icon Suddi Belthangady

ಮುಂಡಾಜೆ ಈದುಲ್ ಫಿತರ್ ಹಬ್ಬ ಆಚರಣೆ: ಮದರಸದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪುರಸ್ಕಾರ

ಮುಂಡಾಜೆ: ‘ಮಸ್ಲಕು ತ್ತ‌ಅಲೀಮಿ ಸ್ಸುನ್ನಿಯ್ಯ’ ಮತ್ತು ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ವತಿಯಿಂದ ಈದುಲ್ ಫಿತರ್ ಹಬ್ಬದ ಪ್ರಯುಕ್ತ ಈದ್ ಸಂದೇಶ ಹಾಗೂ ನಮಾಝ್ ಪೂರ್ವಾಹ್ನ ನಡೆಯಿತು.

ಸಿರಾಜುದ್ದೀನ್ ಸ‌ಅದಿ ನೇತೃತ್ವ ನೀಡಿದರು.ಅಲ್ತಾಫ್ ಸ‌ಅದಿ ಸಹಕರಿಸಿದರು.

ಅಖಿಲ ಭಾರತ ಸುನ್ನೀ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಉಜಿರೆವರೇಂಜ್ ಮದರಸ ವ್ಯಾಪ್ತಿಯಲ್ಲಿ ಐದನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಅನಸ್ ಅಬೂಬಕ್ಕರ್ ಕೆ.ಯು ಅವರನ್ನು ವಿಶೇಷ ಸ್ಮರಣಿಕೆ ನೀಡಿ‌ ಪುರಸ್ಕರಿಸಲಾಯಿತು.

ಕೆಸಿಎಫ್ ಅಂತಾರಾಷ್ಟ್ರೀಯ ಸಂಘಟನೆಯ ವತಿಯಿಂದ ಮೇ.19ರಂದು ಮಂಗಳೂರುನಲ್ಲಿ ನಡೆಯುವ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.

ಸಮಿತಿ ಪದಾಧಿಕಾರಿಗಳು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

Exit mobile version