Site icon Suddi Belthangady

ಅಳದಂಗಡಿ ಸಮೀಪ ಕಾರು ಅಪಘಾತ- ಶಿರೂರು ಮಠದ ಸ್ವಾಮೀಜಿ ಪ್ರಾಣಾಪಾಯದಿಂದ ಪಾರು

ಪಿಲ್ಯ: ಅಳದಂಗಡಿ ಸಮೀಪ ಪಿಲ್ಯದಲ್ಲಿ ಮಾರಿಗುಡಿ ಬಳಿ ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿನಿಂದ ಉಡುಪಿ ದೇವಸ್ಥಾನಕ್ಕೆ ಭೇಟಿ ನೀಡಲು ಆಗಮಿಸಿದ ಶಿರೂರು ಮಠ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಎ.8ರಂದು ನಡೆದಿದೆ.

ಪ್ರಯಾಣಿಸುತ್ತಿದ ಸ್ವಾಮೀಜಿ ಹಾಗೂ ಅದರಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪ್ರವೀಣ್ ಜೈನ್ ಎಂಬವರಿಗೆ ಸೇರಿದ ಮನೆಯ ಕಾಂಪೌಂಡ್ ಮತ್ತು ಗೇಟ್ ಕುಸಿದು ಬಿದ್ದಿದೆ.

Exit mobile version