Site icon Suddi Belthangady

ಬೆಳಾಲು ಪ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಬೇಸಿಗೆ ಶಿಬಿರವು ಸಮಾರೋಪಗೊಂಡಿತು.

ಹಿರಿಯ ಶಿಕ್ಷಕಿ ರಾಜಶ್ರೀ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರೋಪ ದಿನದ ಶಿಬಿರದಲ್ಲಿ ಕಥೆ, ಕವನ ಮತ್ತು ವರದಿಗಾರಿಕೆ ಬಗ್ಗೆ ಬರವಣಿಗೆ ಕಮ್ಮಟ ಹಾಗೂ ಮಿಮಿಕ್ರಿ, ಜಾನಪದ ಗೀತೆಗಳ ಗಾಯನ ಪ್ರಾತ್ಯಕ್ಷಿಕೆ, ತರಬೇತಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಪೂಜ, ಪೂರ್ಣಶ್ರೀ, ಲಿಖಿತ ಮತ್ತು ಪ್ರಸಾದ್ ಶೆಟ್ಟಿ ಮುಂಡಾಜೆ ಇವರು ಆಗಮಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಕೃಷ್ಣಾನಂದ, ಸುಮನ್ ಯು ಎಸ್, ಕೋಕಿಲ ಮತ್ತು ಚಿತ್ರಾ ರವರು ಉಪಸ್ಥಿತರಿದ್ದರು.

ಮಕ್ಕಳಿಂದಲೆ ಕಾರ್ಯಕ್ರಮವು ಪೂರ್ಣವಾಗಿ ಸಂಯೋಜಿಸಲ್ಪಟ್ಟಿತು.

Exit mobile version