Site icon Suddi Belthangady

ಮಾಲಾಡಿ ಪಂಚಾಯತ್ ನ ಮಾಜಿ ಗ್ರಾ.ಪಂ ಸದಸ್ಯ, ಯುವ ಸಂಘಟಕರು ಕಾಂಗ್ರೆಸ್ ಸೇರ್ಪಡೆ

ಮಾಲಾಡಿ: ಮಾಲಾಡಿ ಪಂಚಾಯತ್ ನ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಯುವ ಸಂಘಟಕ, ಯುವ ನಾಯಕರಾದಂತಹ ಜಗನ್ನಾಥ್ ಶೆಟ್ಟಿ ಸೋಣಂದೂರು ಹಾಗೂ ಯುವ ನಾಯಕ ಸೂರಜ್ ಶೆಟ್ಟಿಯವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಇವರ ಸಮ್ಮುಖ ದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಲಾಡಿ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್, ಲೋಕ ಸಭಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ ಕುಕ್ಕೇಡಿ, ನಗರ ಅಲ್ಪ ಸಂಖ್ಯಾತ ಅಧ್ಯಕ್ಷ ಅಬ್ದುಲ್ ಕರೀಂ ಗೇರುಕಟ್ಟೆ, ವಿನ್ಸೆಂಟ್ ಡಿಸೊಜಾ, ಅಶ್ರಫ್ ನೆರಿಯ, ದೇವಿಪ್ರಸಾದ್ ಶೆಟ್ಟಿ ಅಳದಂಗಡಿ, ಸಂಜೀವ ಪೂಜಾರಿ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.

Exit mobile version