Site icon Suddi Belthangady

ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಯವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಕಾರ್ಯ

ಬೆಳ್ತಂಗಡಿ: ರಾಜ್ಯಮಟ್ಟದಲ್ಲಿ ಹೆಸರು ವಾಸಿಯಾಗಿರುವ ವಿಭಿನ್ನ ಶೈಲಿಯ ಸಾಮಾಜಿಕ ಶೈಕ್ಷಣಿಕ ಕ್ರೀಡಾ ಶಿಕ್ಷಣ ಕೆಲಸಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ರಾಜ ಕೇಸರಿ ಸಂಘಟನೆಯ 547ನೇ ಸೇವಾ ಯೋಜನೆ ಪ್ರಯುಕ್ತ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಲೀಲಾವತಿ ಅವರ ಹೊಸ ಮನೆ ಮೈರಾರು ಓಡಿಲ್ನಾಳ ಇವರ ಮನೆಯ ವೈರಿಂಗ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಪೂರ್ಣಗೊಳಿಸಿ ಇವತ್ತು ಅವರಿಗೆ ಹಸ್ತಾಂತರಿಸಲಾಯಿತು.

ಮನೆಯ ಸಂಪೂರ್ಣ ವೈರಿಂಗ್ ಕೆಲಸ ಮತ್ತು ಖರ್ಚು ವೆಚ್ಚಗಳನ್ನು ಲೋಬೊ ಟವರ್ಸ್ ನಲ್ಲಿರುವ ಗಣೇಶ್ ಎಲೆಕ್ಟ್ರಿಕಲ್ಸ್ ಕೆ ಬಿ ರೋಡ್ ಇದರ ಮಾಲಕಯಜ್ಞೇಶ್ ರೈ ಇವರ ಉಚಿತವಾಗಿ ಮಾಡಿಕೊಟ್ಟಿದ್ದಾರೆ.

ಈ ದಿನದ ಹುಟ್ಟುಹಬ್ಬವನ್ನು ಲೀಲಾವತಿಯವರ ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್, ರಾಜ ಕೇಸರಿ ಸಂಘಟನೆಯ ಪ್ರದಾನ ಕಾರ್ಯದರ್ಶಿ ಪ್ರಶಾಂತ್ ಗುರುವಾಯನಕೆರೆ ಸದಸ್ಯರುಗಳಾದ.. ದೇವರಾಜ್, ಸಂದೇಶ್, ಶ್ರೀನಿವಾಸ್ ಮಂಜೊಟ್ಟಿ ಇವರು ಉಪಸ್ಥಿತರಿದ್ದರು.

Exit mobile version