Site icon Suddi Belthangady

ಚಾರ್ಮಾಡಿ ಘಾಟ್ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್- ಬೆಳಗ್ಗೆಯಿಂದ ವಾಹನ ಸವಾರರ ಪರದಾಟ

ಚಾರ್ಮಾಡಿ: ಚಾರ್ಮಾಡಿ ಘಾಟ್ ನ 2ನೇ ತಿರುವಿನಲ್ಲಿ ಬಳ್ಳಾರಿಯಿಂದ ಮಂಗಳೂರಿಗೆ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ 12 ಚಕ್ರದ ಲಾರಿ ತಿರುವಿನಲ್ಲಿ ಟರ್ನ್ ಅಗದೇ ನಿಂತ ಘಟನೆ ನಡೆದಿದೆ.

ಘಾಟ್ ನಲ್ಲಿ ಭಾರಿ ವಾಹನಗಳ ನಿಷೇದವಿದ್ದರೂ ಚೆಕ್ ಪೋಸ್ಟ್ ಸಿಬ್ಬಂದಿಗಳು ನಿಲ್ಲಿಸಿದ್ರು ನಿಲ್ಲಿಸದೇ ಲಾರಿ ಚಾಲಕ ಚಲಾಯಿಸಿಕೊಂಡು ಹೋಗಿದ್ದರು ಎನ್ನಲಾಗಿದೆ.

ಇದರಿಂದಾಗಿ ಬೆಳಗ್ಗೆಯಿಂದ ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಮುಂದೆ ಸಾಗಲು ಆಗದೇ ವಾಹನ ಸವಾರರ ಪರದಾಟ ನಡೆಸಿದರು.

ಕೂಡಲೇ ವಿಷಯ ತಿಳಿದ ಬಣಕಲ್ ಸಬ್ ಲಾರಿ ಚಾಲಕನಿಗೆ ದಂಡ ವಿಧಿಸಿ ಟ್ರಾಫಿಕ್ ಕ್ಲಿಯರ್ ಮಾಡಿದರು.

Exit mobile version