Site icon Suddi Belthangady

ಕುಣಿತ ಭಜನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಸೂಕ್ತ ಕಾನೂನು ಕ್ರಮಕ್ಕಾಗಿ ಧರ್ಮಸ್ಥಳ ಠಾಣೆಯಲ್ಲಿ ಮನವಿ

ನೆರಿಯ: ನೆರಿಯ ಗ್ರಾಮದ ಯಶವಂತ ಎಂಬವರು ತನ್ನ ವಾಟ್ಸಪ್ ಸಂದೇಶದಲ್ಲಿ ಕುಣಿತ ಭಜನೆಯ ಕುರಿತು ಕೀಳು ಮಟ್ಟದ ಬರಹವನ್ನು ಹಾಕಿದ್ದು, ಇದನ್ನು ಕುಣಿತ ಭಜನಾ ತರಬೇತಿದಾರರು ಮತ್ತು ಎಲ್ಲಾ ಭಜನಾ ಸಮೂಹವೂ ಉಗ್ರವಾಗಿ ಖಂಡಿಸಿ ಈತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಧರ್ಮಸ್ಥಳ ಠಾಣೆಗೆ ಕುಣಿತ ಭಜನಾ ತರಬೇತುದಾರರಾದ ವಿ.ಹರೀಶ್ ನೆರಿಯ, ಸಂದೇಶ್ ಮದ್ದಡ್ಕ, ಜನಾರ್ಧನ್ ಉಜಿರೆಯವರು ದೂರನ್ನು ಸಲ್ಲಿಸಿದರು.

ಠಾಣಾಧಿಕಾರಿಯವರು ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದರು.

Exit mobile version