Site icon Suddi Belthangady

ಬಳಂಜ: ಬದಿನಡೆ ದೇವಸ್ಥಾನದಲ್ಲಿ ಶನೀಶ್ವರ ಪೂಜಾ ಸಮಿತಿಯ ಸಭೆ

ಬಳಂಜ: ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆಯ ಶ್ರೀ ಶನೀಶ್ವರ ಪೂಜಾ ಸಮಿತಿಯ ಸಭೆಯು ಮಾ.29ರಂದು ದೇವಸ್ಥಾನದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಈ ವರ್ಷ ಏಪ್ರಿಲ್ 20ರಂದು ಸಾರ್ವಜನಿಕ ಶನೀಶ್ವರ ಪೂಜೆಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜೇಂದ್ರ ಶೆಟ್ಟಿ ಕುರೆಲ್ಯ, ಸರ್ವೋದಯ ಪ್ರೆಂಡ್ಸ್ ಅಟ್ಲಾಜೆ ಇದರ ಅಧ್ಯಕ್ಷರಾದ ಸುರೇಶ್ ಪೂಜಾರಿ ಹೇವ, ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಮಜಲು, ಸತೀಶ್ ಬಿ.ಕೆ ಬರಮೇಲು, ಸದಾನಂದ ಸಾಲಿಯಾನ್ ಬಳಂಜ, ನವೀನ್ ಅಲ್ಲಿಂತ್ಯಾರ್, ಮಧುಕರ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

ಒಟ್ಟು 35 ಮಂದಿಯನ್ನು ಕಾರ್ಯಕ್ರಮದ ಸಂಯೋಜಕರನ್ನಾಗಿ ಮಾಡಲಾಯಿತು.

Exit mobile version