Site icon Suddi Belthangady

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ವಾರ್ಷಿಕೋತ್ಸವ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ಇಲ್ಲಿ ವಾರ್ಷಿಕೋತ್ಸವವು ಮಾ.30ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಉಪಕುಲಪತಿಗಳಾದ ಪ್ರೊ.ಪಿ.ಎಲ್.ಧರ್ಮ ಮಾತನಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿ ರಾಂಕ್ ಪಡೆದುಕೊಂಡಿದ್ದೀರಿ ಮಂಜುನಾಥನ ಕೃಪೆ ಆಶೀರ್ವಾದ ಇದೆ ಯಶಸ್ಸನ್ನು ಸಾಧಿಸುತ್ತೀರಿ ಎಂದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್ ಉಪಸ್ಥಿತಿ ಇದ್ದರು.

ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ್ ಹೆಗ್ಡೆ ಸ್ವಾಗತಿಸಿ, 4ನೇ ಬಾರಿಗೆ ಅತ್ಯುತ್ತಮ ಹೆಸರು ವಾಸಿಯಾಗಿರುವ ಈ ಪರಿಸರದ ಅತಿ ದೊಡ್ಡ ಕಾಲೇಜ್ ಎಂದು ವರದಿ ವಾಚನ ಮಾಡಿ, ಉಪಪ್ರಾಂಶುಪಾಲ ಶಶಿಶೇಖರ ಕಾಕತ್ಕರ್ ವಂದಿಸಿ, ಸಹಪ್ರಾಧ್ಯಾಪಕ ಡಾ.ಶ್ರೀಧರ ಭಟ್ಟ ನಿರೂಪಿಸಿದರು.

Exit mobile version