Site icon Suddi Belthangady

ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣ: 7 ದಿನಗಳ ನಂತರ ತವರಿಗೆ ತಲುಪಿದ ಮೂವರ ಮೃತದೇಹ

ಉಜಿರೆ: ಬಹುದಿನಗಳ ಹಿಂದೆ ತುಮಕೂರಿನ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕುಚ್ಚಂಗಿಕೆರೆಯಲ್ಲಿ ನಿಧಿ ಆಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ಬಳಿಕ ಇದೀಗ ಮೂವರ ಮೃತದೇಹವನ್ನು ಮನೆಮಂದಿಗೆ 7 ದಿನದ ಬಳಿಕ ಮಾ.28 ರಂದು ಹಸ್ತಾಂತರ ಮಾಡಿದ್ದು, ಮಾ.29 ರಂದು ಶುಕ್ರವಾರ ಬೆಳಗ್ಗೆ ಮನೆಗೆ ತಲುಪಿದೆ.

ಮೂವರ ಮೃತದೇಹ ಮಾ.29ರಂದು ಬೆಳಗ್ಗೆ ವಿಶೇಷ ಅಂಬುಲೆನ್ಸ್ ಮೂಲಕ ಕರೆತರಲಾಯಿತು.ಶಾಹುಲ್ ಹಮೀದ್ ಹಾಗೂ ಇಸಾಕ್ ರವರ ಮೃತದೇಹ ಬೆಳಗಿನ ಜಾವ ಉಜಿರೆ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ತಲುಪಿದೆ ಹಾಗೂ ಸಿದ್ದೀಕ್ ರವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದೆ.

ನಂತರ ವಿಶೇಷ ಪ್ರಾರ್ಥನೆ ನೆರವೇರಿದ್ದು, ಸ್ಮಶಾನದಲ್ಲಿ ಮಯ್ಯತ್(ದಫನ್) ಕಾರ್ಯ ನೆರವೇರಿದೆ.ಸಾವಿರಾರು ಜನರು ಈ ಮಯ್ಯತ್ ಕಾರ್ಯದಲ್ಲಿ ಭಾಗಿಯಾದರು.

Exit mobile version