Site icon Suddi Belthangady

ಕೊಕ್ಕಡ: ಶಬರಾಡಿಯಲ್ಲಿ ತೋಟದಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕಳವು

ಕೊಕ್ಕಡ: ತೋಟದಲ್ಲಿ ಮೇಯಲುಕಟ್ಟಿ ಹಾಕಿದ್ದ ದನ ಕಳವುಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿ ನಡೆದಿದೆ.

ಕಳವಾದ ದನ ಕೊಕ್ಕಡ ಗ್ರಾಮ, ಬೆಳ್ತಂಗಡಿ ನಿವಾಸಿ ಶಿವಪ್ರಸಾದ್ ಎನ್ನಲಾಗಿದೆ.ಬೆಳ್ತಂಗಡಿ ನಿವಾಸಿ ಶಿವಪ್ರಸಾದ್ ಎಂಬವರು ಮಾ.25ರಂದು ಬೆಳಿಗ್ಗೆ ತನ್ನ ದನವನ್ನು ತನ್ನ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದು, ಬಳಿಕ ಮದ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು ಕಟ್ಟಿ ಹಾಕಿದ್ದಲ್ಲಿ ಕಂಡು ಬಂದಿರುವುದಿಲ್ಲ.

ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ದನವು ಎಲ್ಲೂ ಪತ್ತೆಯಾಗಿರುವುದಿಲ್ಲ. ಕಳವಾದ ದನದ ಮೌಲ್ಯ ರೂ 20,000 ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಶಿವಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 21/2024 ಕಲಂ: 379 IPC ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Exit mobile version