Site icon Suddi Belthangady

ಬಂದಾರು: ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರುನಲ್ಲಿ ಒಂಟಿ ಸಲಗದಿಂದ ಭತ್ತದ ಕೃಷಿಗೆ ಹಾನಿ

ಬಂದಾರು: ಬಂದಾರು ಗ್ರಾಮದ ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರು ಎಂಬಲ್ಲಿ ಮಾ.27ರಂದು ಮುಂಜಾನೆ ಒಂಟಿ ಸಲಗ ದಾಳಿ ಮಾಡಿದೆ.

ನಿನ್ನೆ ಸಂಜೆ ಹತ್ತಿರದ ನೇತ್ರಾವತಿ ನದಿಯ ಬಿಬಿಮಜಲ್ ಪ್ರದೇಶದಲ್ಲಿ ಘೀಳಿಡುವ ಶಬ್ದ ಕೇಳಿಬಂದ್ದಿದು ಇಂದು ಮುಂಜಾನೆ ಮೋನಪ್ಪ ಗೌಡ ನೆಲ್ಲಿಗೇರು ಇವರ ಗದ್ದೆಯಲ್ಲಿ ಭತ್ತದ ಕೃಷಿಯನ್ನು ಹಾನಿ ಮಾಡಿದ್ದೂ ಹತ್ತಿರದ ರಾಮಣ್ಣ ನೆಲ್ಲಿಗೇರು ಇವರ ಕೃಷಿ ಪಂಪ್ ಹಾಗೂ ಕೇಬಲ್ ಗೆ ಹಾನಿ ಮಾಡಿದ್ದೂ ಅಪಾರ ನಷ್ಟ ಉಂಟಾಗಿದ್ದು ಬೆಳಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

Exit mobile version