Site icon Suddi Belthangady

ಮುಂಡಾಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಪರಿಹಾರ ಪೂಜಾ ಕಾರ್ಯಕ್ರಮ

ಮುಂಡಾಜೆ: ಮುಂಡಾಜೆ ಗ್ರಾಮದ ಕೊಡಂಗೆ ಎಂಬಲ್ಲಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪೂರ್ವ ಪರಿಹಾರಾರ್ಥವಾಗಿ “ಸುದರ್ಶನ ಹೋಮ, ದುರ್ಗಾ ಪೂಜೆ ಬೆಳ್ತಂಗಡಿಯ ಗಣೇಶ ಐತಾಳ್ ರವರ ಪೌರೋಹಿತ್ಯದಲ್ಲಿ ಇತ್ತೀಚೆಗೆ ನೇರವೇರಿಸಲಾಯಿತು.

ದೇವಸ್ಥಾನದ ಟ್ರಸ್ಟ್ ಗೌರವಾಧ್ಯಕ್ಷ ರಾಜಗೋಪಾಲ, ಅಧ್ಯಕ್ಷ ಸಚಿನ್ ಎಂ.ಎಸ್, ಕಾರ್ಯದರ್ಶಿ ಮಂಜೇಶ್, ಟ್ರಸ್ಟ್ ಸದಸ್ಯರಾದ ವಸಂತ ಕಾಶಿಬೆಟ್ಟು, ರೋಹಿತ್ ಕಾಶಿಬೆಟ್ಟು, ಎಂ.ಡಿ.ಭಾಸ್ಕರ್, ರವಿ ನೆಯ್ಯಾಲು, ಶ್ರೀಮತಿ ಸವಿತಾ ಕೇಶವ ದೇವಾಂಗ, ಹೇಮಾ ರಾಜೇಶ್, ವಿಜಯ್ ಕುಮಾರ್,ಜಯಂತ ದೇವಾಂಗ, ಪ್ರಶಾಂತ ದೇವಾಂಗ, ಶಶಿಧರ ನೇಕಾರ, ಶಿವಪ್ರಸಾದ್ ಮತ್ತು ಶ್ರೀಮತಿ ಪುಷ್ಪ ಕಡಂಬಳ್ಳಿಯವರು ನೇತೃತ್ವ ವಹಿಸಿದ್ದರು.

ಸಮುಂಡಾಜೆ ಗ್ರಾಮದ ದೇವಾಂಗ ಸಮಾಜದ ಬಾಂಧವರು ಮತ್ತು ಊರ ಹತ್ತು ಸಮಸ್ತರು ಭಾಗವಹಿಸಿದ್ದರು.

Exit mobile version