Site icon Suddi Belthangady

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಬಿ.ಪದ್ಮನಾಭ ಸಾಲ್ಯಾನ್ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಸಮಿತಿಯ ಸದಸ್ಯರಾಗಿ, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಬಿ.ಪದ್ಮನಾಭ ಸಾಲ್ಯಾನ್ ರವರನ್ನು ಕರ್ನಾಟಕ ಸರಕಾರ ನೇಮಕಗೊಳಿಸಿ ಆದೇಶಿಸಿದೆ.

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ 2ನೇ ಅವಧಿಯ ನಿರ್ದೇಶಕರಾಗಿ ಶಿಕ್ಷಣ ಇಲಾಖೆಯ ಭಾರತ ಸೇವಾದಳದ ತಾಲೂಕು ಉಪಾಧಕ್ಷರಾಗಿದ್ದು, 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿಯಾಗಿ, ಗ್ರಾ.ಪಂ ಮಾಲಾಡಿಯಲ್ಲಿ 4 ಅವಧಿಯಲ್ಲಿ ಸದಸ್ಸರಾಗಿ 2 ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು.

2007ರಲ್ಲಿ ರಾಷ್ಟ್ರಪತಿಯವರಿಂದ ನಿರ್ಮಲ ಗ್ರಾಮ ಪುರಸ್ಕಾರ ಅವಾರ್ಡ್ ಪಡೆದು, 2008ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಗ್ರ್ಯಾಜ್ಯುವೇಟ್ ಡಿಪ್ಲೊಮೊ ಇನ್ ಪಂಚಾಯತ್ ರಾಜ್ ಪದವಿಯನ್ನು ಪಡೆದು ನಿರಂತರ ಸಾರ್ವಜನಿಕ ಸಂಘಟನೆಗಳಲ್ಲಿ ಅವಿರತ ಶ್ರಮಿಸುತ್ತಿರುವ ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.

Exit mobile version